
ಬೆಂಗಳೂರು(ಜು.18): ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಯ ಆಟಗಾರರ ಹರಾಜಿಗೆ 3 ದಿನ ಬಾಕಿ ಇದ್ದು, ತಂಡಗಳು ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಆರಂಭಿಸಿವೆ.
ಪ್ರತಿ ತಂಡಕ್ಕೆ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದು, ಮೈಸೂರು ವಾರಿಯರ್ಸ್ ತಂಡ ರಾಜ್ಯ ರಣಜಿ ತಂಡದ ಸ್ಪಿನ್ನರ್ ಜೆ.ಸುಚಿತ್, ವೇಗಿ ವೈಶಾಖ್ ವಿಜಯ್ ಕುಮಾರ್, ಎಸ್.ಪಿ.ಮಂಜುನಾಥ್ ಹಾಗೂ ಕೆ. ಎನ್.ಭರತ್ರನ್ನು ಉಳಿಸಿಕೊಂಡಿರುವುದಾಗಿ ಮಂಗಳವಾರ ಟ್ವೀಟರ್ನಲ್ಲಿ ಬಹಿರಂಗಗೊಳಿಸಿತು.
ಜು.21 ರಂದು 7ನೇ ಆವೃತ್ತಿಯ ಕೆಪಿಎಲ್ ಹರಾಜು ಪ್ರಕ್ರಿಯೆ ಇರುವ ಬೆನ್ನಲ್ಲೆ ಕಳೆದ ಬಾರಿಯ ರನ್ನರ್ ಅಪ್ ಬಿಜಾಪುರ ಬುಲ್ಸ್ ನಾಲ್ವರು ಆಟಗಾರರು ರೀಟೈನ್ (ಉಳಿಕೆ) ಮಾಡಿಕೊಂಡಿದೆ. ಹಿಂದಿನ ಆವೃತ್ತಿಯ ನಾಯಕ ಭರತ್ ಚಿಪ್ಲಿ, ಕೆ.ಸಿ. ಕರಿಯಪ್ಪ, ರೋನಿತ್ ಮೋರೆ ಮತ್ತು ನವೀನ್ ಎಂ.ಜಿ.
ಅವರನ್ನು ಬುಲ್ಸ್ ತನ್ನಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಂಡದ ಮಾಲೀಕ ಕಿರಣ್
ಕಟ್ಟಿಮನಿ ‘ಸುವರ್ಣ್ ನ್ಯೂಸ್.ಕಾಂ’ಗೆ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.