
ನವದೆಹಲಿ(ಸೆ.23): ಪ್ರಮುಖ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳು ಶೀಘ್ರದಲ್ಲೇ ಎಸ್ಎಂಎಸ್ ಹಾಗೂ ವಾಟ್ಸ್ಆ್ಯಪ್ ಮೂಲಕವೇ ಬಹುಮಾನ ಮೊತ್ತ ಗಳಿಸಬಹುದಾಗಿದೆ.
ಕಾಮನ್ವೆಲ್ತ್ನಲ್ಲಿ ಶೂಟಿಂಗ್: ಬ್ರಿಟನ್ಗೆ ರಿಜಿಜು ಪತ್ರ
ಕೇಂದ್ರ ಕ್ರೀಡಾ ಸಚಿವಾಲಯ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಆರಂಭಿಸಿದೆ. ಫಲಿತಾಂಶಗಳು ಅಧಿಕೃತ ವೆಬ್ಸೈಟ್, ಸಾಮಾಜಿಕ ತಾಣಗಳಲ್ಲಿ ತಕ್ಷಣ ಲಭ್ಯವಿರುವ ಕಾರಣ, ಬಹುಮಾನ ಮೊತ್ತವೂ ಅಷ್ಟೇ ಬೇಗ ತಲುಪಬೇಕು ಎನ್ನುವುದು ಕ್ರೀಡಾ ಸಚಿವ ಕಿರಣ್ ರಿಜಿಜುಅವರ ಉದ್ದೇಶವಾಗಿದೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2019: ಬೆಳ್ಳಿಗೆ ತೃಪ್ತಿಪಟ್ಟ ದೀಪಕ್
‘ಕ್ರೀಡಾಪಟುಗಳು ತಾವು ಗೆದ್ದಿರುವ ಬಗ್ಗೆ ಎಸ್ಎಂಎಸ್ ಇಲ್ಲವೇ ವಾಟ್ಸ್ಆ್ಯಪ್ ಮೂಲಕ ತಿಳಿಸಿದರೆ, ಕೇವಲ ಒಂದು ದಿನದಲ್ಲಿ ಬಹುಮಾನ ಮೊತ್ತ ಅವರ ಕೈ ಸೇರುವಂತೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ತಮ್ಮ ಸಾಧನೆಗೆ ಅರ್ಹ ಬಹುಮಾನ ಗಳಿಸಲು ಇನ್ಮುಂದೆ ಕ್ರೀಡಾಪಟುಗಳು ಕಾಯುವಂತಿರುವುದಿಲ್ಲ’ ಎಂದು ಕ್ರೀಡಾ ಕಾರ್ಯದರ್ಶಿ ಆರ್.ಎಸ್.ಜುಲಾನಿಯಾ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.