
ಕಜಕಸ್ತಾನ(ಸೆ.23): 2019ರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಏಕೈಕ ಕುಸ್ತಿಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದ ದೀಪಕ್ ಪೂನಿಯಾ, ಗಾಯದ ಕಾರಣ ಫೈನಲ್ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದರು. ಇದರಿಂದಾಗಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ಸೆಮಿಫೈನಲ್ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ದೀಪಕ್, ಕೈ ಹೆಬ್ಬೆರಳಿನ ನೋವಿನಿಂದಲೂ ಬಳಲುತ್ತಿದ್ದರು ಎಂದು ತಂಡದ ವೈದ್ಯರು ತಿಳಿಸಿದ್ದಾರೆ. ಫೈನಲ್ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಇರಾನ್ನ ಹಸ್ಸಾನ್ ಯಾಜ್ದಾನಿ ವಿರುದ್ಧ ದೀಪಕ್ ಸೆಣಸಬೇಕಿತ್ತು.
ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಫೈನಲ್ಗೇರಿ ಇತಿಹಾಸ ಬರೆದ ದೀಪಕ್!
ಚಿನ್ನ ಗೆಲ್ಲುವ ಅವಕಾಶದಿಂದ ದೀಪಕ್ ವಂಚಿತಗೊಂಡ ಕಾರಣ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಕುಸ್ತಿಪಟುವಾಗಿ ಸುಶೀಲ್ ಕುಮಾರ್ ಉಳಿದುಕೊಂಡಿದ್ದಾರೆ. 2010ರ ಮಾಸ್ಕೋ ವಿಶ್ವ ಚಾಂಪಿಯನ್ಶಿಪ್ನ 66 ಕೆ.ಜಿ ವಿಭಾಗದಲ್ಲಿ ಸುಶೀಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ರಾಹುಲ್ ಅವಾರೆಗೆ ಕಂಚು
ಭಾರತದ ರಾಹುಲ್ ಅವಾರೆ ಒಲಿಂಪಿಕ್ ವಿಭಾಗವಲ್ಲದ 61 ಕೆ.ಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು. ಭಾನುವಾರ ನಡೆದ ಪಂದ್ಯದಲ್ಲಿ 2017ರ ಪ್ಯಾನ್ ಅಮೆರಿಕನ್ ಚಾಂಪಿಯನ್ ಟೈಲರ್ ಲೀ ಗ್ರಾಫ್ರನ್ನು ಮಣಿಸಿದರು. 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ರಾಹುಲ್ ಚಿನ್ನ ಜಯಿಸಿದ್ದರು.
ಭಾರತ ಒಟ್ಟು 5 ಪದಕ ಜಯಿಸುವ ಮೂಲಕ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಶ್ರೇಷ್ಠ ಸಾಧನೆ ಮಾಡಿತು. 2013ರ ಆವೃತ್ತಿಯಲ್ಲಿ 3 ಪದಕ ಗೆದ್ದಿದ್ದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.