ಅಂತರಾಷ್ಟ್ರೀಯ ಅಥ್ಲೀಟ್, ಕನ್ನಡಿಗ ಅರ್ಜುನ್ ದೇವಯ್ಯ ಕಾರು ಅಪಘಾತ

By Web DeskFirst Published Nov 27, 2018, 4:10 PM IST
Highlights

ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಕಾರು ಅಪಘಾತವಾಗಿದೆ. ಬೆಳಗಿನಜಾವ ತುಂಬಾ ಮಂಜು ಕವಿದಿದ್ದರಿಂದ ತಿರುವಿನಲ್ಲಿ ರಸ್ತೆ ಕಾಣದೇ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಹೊಡೆದಿದೆ.

ಬೆಂಗಳೂರು[ನ.27]: ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಅಥ್ಲೀಟ್ ಅರ್ಜುನ್ ದೇವಯ್ಯ ಅವರ ಕಾರು ಅಪಘಾತವಾಗಿದ್ದು, ಅರ್ಜುನ್ ತಲೆಗೆ, ಪತ್ನಿ ದಿವ್ಯಾ ಕೈಗೆ ತೀವ್ರವಾಗಿ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಫತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಕಾರು ಅಪಘಾತವಾಗಿದೆ. ಬೆಳಗಿನಜಾವ ತುಂಬಾ ಮಂಜು ಕವಿದಿದ್ದರಿಂದ ತಿರುವಿನಲ್ಲಿ ರಸ್ತೆ ಕಾಣದೇ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಹೊಡೆದಿದೆ. ಕಾರಿನಲ್ಲಿ ಅರ್ಜುನ್ ದೇವಯ್ಯ, ಪತ್ನಿ ದಿವ್ಯಾ, ಪುತ್ರ ಅಭಿಮನ್ಯು ಸೇರಿ ಒಟ್ಟು ಐವರು ಇದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅರ್ಜುನ್ ಹಾಗೂ ದಿವ್ಯಾ ಅವರಿಗೆ ಗಂಭೀರ ಆಗಿದ್ದು, ಈ ಸಂಬಂಧ ಬಿಳಿಕರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

click me!