
ಕೋಲ್ಕತ್ತಾ(ನ.17): ಈಡನ್ ಗಾರ್ಡ್'ನ್'ನಲ್ಲಿ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್'ನ 2ನೇ ದಿನವೂ ಮಳೆಯೇ ಆಟವಾಡಿತು. ಬೆಳಿಗ್ಗೆ ಪಂದ್ಯ ಆರಂಭವಾದರೂ ನಡೆದಿದ್ದು ಮಾತ್ರ ಕೇವಲ 20 ಓವರ್'ಗಳ ಆಟ.
ನಿನ್ನೆ 11.5 ಓವರ್ ಆಟ ನಡೆದು 17/3 ವಿಕೇಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು 20 ಓವರ್'ಗಳಲ್ಲಿ ಮತ್ತೆರಡು ವಿಕೇಟ್ ಪತನವಾಯಿತು. ಅಜಿಂಕ್ಯಾ ರಹಾನೆ ಹಾಗೂ ಆರ್. ಅಶ್ವಿನ್ ತಲಾ 4 ರನ್ ಗಳಿಸಿ ಶಾನಕಾ ಬೌಲಿಂಗ್'ನಲ್ಲಿ ಔಟಾದರು. ಕ್ರೀಸ್'ನಲ್ಲಿ ಚೇತೇಶ್ವರ್ ಪೂಜಾರ 47 ಹಾಗೂ ವೃದ್ಧಿಮಾನ್ ಸಹಾ 6 ರನ್ ಗಳಿಸಿ ಆಟವಾಡುತ್ತಿದ್ದರು. ಮಳೆ ಹೆಚ್ಚಾದ ಕಾರಣ ಮಧ್ಯಾಹ್ನ 2.30ಕ್ಕೆ ದಿನದ ಆಟವನ್ನು ರದ್ದುಗೊಳಿಸಲಾಯಿತು.
ಸ್ಕೋರ್
ಭಾರತ 32.5 ಓವರ್'ಗಳಲ್ಲಿ 74/5
(ಪೂಜಾರ ಅಜೇಯ 47, ಸಹಾ ಅಜೇಯ 6, ಲಕ್ಮಲ್ 5/3, ಶಾನಕ 2/23)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.