ಮತ್ತೆ ಕೈ ಕೊಟ್ಟ ಆರಂಭಿಕರು, 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ

Published : Oct 02, 2016, 07:36 AM ISTUpdated : Apr 11, 2018, 12:45 PM IST
ಮತ್ತೆ ಕೈ ಕೊಟ್ಟ ಆರಂಭಿಕರು, 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ

ಸಾರಾಂಶ

ಕೊಲ್ಕತ್ತಾ(ಅ.02): ತವರಿನ 250ನೇ ಟೆಸ್ಟ್​​​ ಆಡುತ್ತಿರುವ ಭಾರತ, ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. 

ಕಿವೀಸ್​​ ವಿರುದ್ಧ 112ರನ್​​ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಮೊದಲ ಇನ್ನಿಂಗ್ಸ್'ನಲ್ಲಿ 204ರನ್​​ಗಳಿಗೆ ಕಿವೀಸ್​​ ತಂಡವನ್ನು ಕಟ್ಟಿ ಹಾಕಿತ್ತು. ಇದೇ ಜೋಷ್ ನಲ್ಲಿ ಎರಡನೇ ಇನ್ನಿಂಗ್ಸ್  ಆರಂಭಿಸಿದ ಭಾರತ  4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಆರಂಭಿಕರಾದ ಮುರುಳಿ ವಿಜಯ್ ಮತ್ತು ಶಿಖರ್ ಧವನ್ ಮತ್ತೆ ಕೈ ಕೊಟ್ಟಿದ್ದು, ವಿಜಯ್ 7 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ, ಉತ್ತಮ ಇನ್ನಿಂಗ್ಸ್ ಕಟ್ಟು ಸೂಚನೆ ನೀಡಿದ ಧವನ್ 17 ರನ್'ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. 

ನಂತರ ಬಂದ ಚೇತೇಶ್ವರ ಪೂಜಾರ 4 ರನ್ ಗಳಿಗೆ ತಮ್ಮ ಬ್ಯಾಟಿಂಗ್ ಕೊನೆಗಳಿದರು, ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ಅಜಿಂಕ್ಯಾ ರಹಾನೆ 1 ರನ್ ಗಳಿಸುವಷ್ಟರಲ್ಲಿ  ಪೆವೆಲಿಯನ್ ಸೇರಿದರು. ಕಿವೀಸ್ ಪರ ಉತ್ತಮ ದಾಳಿ ನಡೆದಿದ ಹೆನ್ರಿ ಮೂರು ವಿಕೆಟ್ ಪಡೆದರೆ, ಬೋಲ್ಟ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು. 

ಈ ಸಮಯದ ವರದಿ ಬಂದಾಗ ಭಾರತ 67 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!