Wrestlers Protest ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Published : May 29, 2023, 03:21 PM IST
Wrestlers Protest ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಸಾರಾಂಶ

ಬ್ರಿಜ್‌ಭೂಷಣ್ ಬಂಧಿಸಲು ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಆಗಲಿದೆ ಎಂದ ಕೇಂದ್ರ ಸಂಸ್ಕೃತಿ ಸಚಿವೆ


ಬೆಂಗಳೂರು(ಮೇ.29): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಅವರನ್ನು ಬಂಧಿಸಲು ಆಗ್ರಹಿಸಿ ಭಾರತೀಯ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ನಿರಾಕರಿಸಿದ್ದಾರೆ. 

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ತಾರಾ ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಹಾಗೂ ಭಜರಂಗ್ ಪೂನಿಯಾ ಸೇರಿದಂತೆ ಹಲವಾರು ಕುಸ್ತಿಪಟುಗಳು ಕಳೆದ 35 ದಿನಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಕುರಿತಂತೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಬಳಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ. ಇದಕ್ಕೆ ಅಂತನೇ ಕೋರ್ಟ್ ಇದೆ, ಕಾನೂನು ಇದೆ. ಒಬ್ಬ ರಾಜನಿಗೂ ಕೂಡಾ ಈ ದೇಶದ ಕಾನೂನು ಅನ್ವಯ ಆಗಲಿದೆ. ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.

ಲೈಂಗಿಕ ಕಿರು​ಕುಳ ಪ್ರಕ​ರ​ಣ​ದಲ್ಲಿ 2 ಎಫ್‌​ಐ​ಆರ್‌ ದಾಖ​ಲಾ​ದರೂ ಭಾರತೀಯ ಕುಸ್ತಿ ಫೆಡ​ರೇ​ಶ​ನ್‌​ (​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ರನ್ನು ಇನ್ನೂ ಬಂಧಿ​ಸದಿ​ರು​ವು​ದನ್ನು ಪ್ರಶ್ನಿಸಿ ಭಾನು​ವಾರ ನೂತನ ಸಂಸತ್‌ ಭವ​ನಕ್ಕೆ ಮುತ್ತಿಗೆ ಹಾಕುವ ಕುಸ್ತಿ​ಪ​ಟು​ಗ​ಳ ಪ್ರಯತ್ನ ಭಾರೀ ಹೈಡ್ರಾಮಾಕ್ಕೆ ಕಾರ​ಣ​ವಾಯಿತು. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್‌ ಭವ​ನ ಉದ್ಘಾ​ಟಿ​ಸಿದ ದಿನವೇ ಒಲಿಂಪಿಕ್‌ ಸಾಧ​ಕ​ರನ್ನು ನಡು ರಸ್ತೆಯಲ್ಲೇ ಬಂಧಿ​ಸಿದ ಘಟನೆಗೆ ತೀವ್ರ ಆಕ್ರೋ​ಶ ಕೂಡಾ ವ್ಯಕ್ತ​ವಾ​ಗಿ​ದೆ.

ನಾವು ಮಾಡಿದ ತಪ್ಪೇ​ನು?:

ಪೊಲೀ​ಸರು ತಮ್ಮನ್ನು ಬಂಧಿ​ಸಿ​ದ್ದಕ್ಕೆ ಕಿಡಿ​ಕಾ​ರಿದ ವಿನೇಶ್‌, ‘ನವ ಭಾರ​ತಕ್ಕೆ ಸ್ವಾಗತ. ಇಲ್ಲಿ ಅ​ಪ​ರಾ​ಧಿ​ಗಳು ಮುಕ್ತ​ವಾಗಿ ಓಡಾ​ಡು​​ತ್ತಿ​ದ್ದಾರೆ. ದೇಶ​ಕ್ಕಾಗಿ ಪದಕ ಗೆದ್ದ​ವರನ್ನು ನ್ಯಾಯ ಕೇಳಿ​ದ್ದಕ್ಕೆ ಬಂಧಿಸಿ ಜೈಲಲ್ಲಿ ಇಡು​ತ್ತಿ​ದ್ದಾರೆ. ಯಾವು​ದಾ​ದರೂ ಸರ್ಕಾರ ಚಾಂಪಿ​ಯನ್‌ ಅಥ್ಲೀ​ಟ್‌​ಗಳ ಜೊತೆ ಈ ರೀತಿ ವರ್ತಿ​ಸಿ​ದೆ​ಯೇ? ನಾವು ಮಾಡಿದ ಅಪ​ರಾ​ಧ​ವಾ​ದರೂ ಏನು? ಲೈಂಗಿಕ ಕಿರು​ಕುಳ ಆರೋಪಿ ಬ್ರಿಜ್‌​ಭೂ​ಷಣ್‌ ಪಾರ್ಲಿ​ಮೆಂಟ್‌​ನಲ್ಲಿದ್ದರೆ, ನಮ್ಮನ್ನು ರಸ್ತೆ​ಯಲ್ಲಿ ಎಳೆ​ದೊ​ಯ್ಯು​ತ್ತಿ​ದ್ದಾರೆ. ವಿಶ್ವವೇ ನಮ್ಮನ್ನು ನೋಡು​ತ್ತಿ​ದೆ. ಇದು ಭಾರ​ತೀಯ ಕ್ರೀಡೆಯ ಕರಾಳ ದಿನ​’ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

​"ಅವರು ಇನ್ನು ತೂಕಡಿಸ್ತಿದ್ದಾರೆ": ಭಾರತದ WTC 2027 ಫೈನಲ್ ಕನಸಿಗೆ ಗಂಭೀರ್‌ ಅಡ್ಡಿ? ಮಾಜಿ ಓಪನರ್ ಶಾಕಿಂಗ್ ಹೇಳಿಕೆ!
ಒಂದೂ ಸರಣಿಯೂ ಸೋತಿಲ್ಲ ಆದರೂ...ತಂಡದಿಂದ ಕೊಕ್ ಬಳಿ ಮೊದಲ ಬಾರಿಗೆ ಸೂರ್ಯಕುಮಾರ್ ಮಾತು