ಬಿಸಿಸಿಐ ಬಗ್ಗೆ ಜಿಆರ್'ವಿ ಅಸಮಾಧಾನ

Published : Sep 23, 2016, 04:13 PM ISTUpdated : Apr 11, 2018, 01:11 PM IST
ಬಿಸಿಸಿಐ ಬಗ್ಗೆ ಜಿಆರ್'ವಿ ಅಸಮಾಧಾನ

ಸಾರಾಂಶ

‘‘ಕಾ​ನ್ಪು​ರದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾನು ಒಟ್ಟು 91 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಅಲ್ಲಿಯೇ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿ 500ಕ್ಕೂ ಹೆಚ್ಚು ರನ್‌ ಗಳಿಸಿದ್ದೇನೆ. ಇದೇ ತಾಣದಲ್ಲಿ ಭಾರತ 500ನೇ ಟೆಸ್ಟ್‌ ಆಡುತ್ತಿದ್ದು, ಈ ಚಾರಿತ್ರಿಕ ಕ್ಷಣಕ್ಕೆ ನನ್ನನ್ನು ಆಹ್ವಾನಿಸದೆ ಹೋದದ್ದು ತರವೇ?"- ಜಿ.ಆರ್. ವಿಶ್ವನಾಥ್

ಹುಬ್ಬಳ್ಳಿ(ಸೆ.23): ಕಾನ್ಪುರದಲ್ಲಿ ಗುರುವಾರ ನಡೆದ ಸಂಭ್ರಮಕ್ಕೆ ಬಿಸಿಸಿಐ ಆಹ್ವಾನ ನೀಡದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಜಿ.ಆರ್‌. ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘‘ಕಾ​ನ್ಪು​ರದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾನು ಒಟ್ಟು 91 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಅಲ್ಲಿಯೇ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿ 500ಕ್ಕೂ ಹೆಚ್ಚು ರನ್‌ ಗಳಿಸಿದ್ದೇನೆ. ಇದೇ ತಾಣದಲ್ಲಿ ಭಾರತ 500ನೇ ಟೆಸ್ಟ್‌ ಆಡುತ್ತಿದ್ದು, ಈ ಚಾರಿತ್ರಿಕ ಕ್ಷಣಕ್ಕೆ ನನ್ನನ್ನು ಆಹ್ವಾನಿಸದೆ ಹೋದದ್ದು ತರವೇ?" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ನಾನು ಬಿಸಿಸಿಐ ಜತೆ ಯಾವುದೇ ರೀತಿಯ ಸಂಹವನ ನಡೆಸಿಲ್ಲ. ಆದರೆ, ಅಲ್ಲಿನ ಅಧಿಕಾರಿಯೊಬ್ಬರು ಫೋನ್‌ ಮಾಡಿ, ‘‘ಉತ್ತರಪ್ರದೇಶ ಕ್ರಿಕೆಟ್‌ ಸಂಸ್ಥೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿತ್ತು. ಹೀಗಾಗಿ ಸಂಪರ್ಕದ ಕೊರತೆಯಿಂದ ಆಹ್ವಾನಿಸಿಲ್ಲ’’ ಎಂದರು. ಇಷ್ಟಕ್ಕೂ ಕಾರ್ಯಕ್ರಮ ಆಯೋಜಿಸಿದ್ದು  ಬಿಸಿಸಿಐ ತಾನೇ ಎಂದು ಅವರಿಗೆ ಉತ್ತರಿಸಿದೆ ಎಂದು ವಿಶ್ವನಾಥ್‌ ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?