ಟೋಕಿಯೊ(ಸೆ.23): ಎಂಟರ ಘಟ್ಟದ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಭಾರತದ ಕೆ. ಶ್ರೀಕಾಂತ್ ಜಪಾನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಕಾದಾಟದಲ್ಲಿ ಜರ್ಮನಿಯ ಮಾರ್ಕ್ ಜ್ವೀಬ್ಲರ್ ವಿರುದ್ಧ ಶ್ರೀಕಾಂತ್ 21-18, 14-21, 19-21ರಿಂದ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.
ಎಂಟನೇ ಶ್ರೇಯಾಂಕಿತ ಶ್ರೀಕಾಂತ್ ರಿಯೊ ಕೂಟದ ನಂತರ ಮೊದಲ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ವಾರ್ಟರ್ಫೈನಲ್ ತಲುಪಿದರಾದರೂ, ವಿಶ್ವದ 15ನೇ ಶ್ರೇಯಾಂಕಿತ ಆಟಗಾರ ಜ್ವೀಬ್ಲರ್ ಎದುರು ಗಟ್ಟಿಯಾಗಿ ನಿಲ್ಲಲಾಗದೆ ಪರಾಜಿತರಾದರು.