
ಕೋಲ್ಕತಾ(ಫೆ.02): ಡೇವಿಸ್ ಕಪ್ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ಶುಕ್ರವಾರ ಇಲ್ಲಿ ಆರಂಭಗೊಂಡ ಇಟಲಿ ವಿರುದ್ಧದ ಪಂದ್ಯದಲ್ಲಿ ಭಾರತ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿತು.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಾಮ್ ಕುಮಾರ್ ರಾಮನಾಥನ್, ಆ್ಯಂಡ್ರೆಸ್ ಸೆಪ್ಪಿ ವಿರುದ್ಧ 4-6, 2-6 ಸೆಟ್ಗಳಲ್ಲಿ ಸೋಲುಂಡರೆ, 2ನೇ ಸಿಂಗಲ್ಸ್ನಲ್ಲಿ ಭಾರತದ ನಂ.1 ಪ್ರಜ್ನೇಶ್ ಗುಣೇಶ್ವರನ್, ಚೊಚ್ಚಲ ಡೇವಿಸ್ ಕಪ್ ಪಂದ್ಯ ವನ್ನಾಡಿದ ಮಾಟ್ಟೆಯೋ ಬೆರೆಟ್ಟಿನಿ ವಿರುದ್ಧ 4-6, 3-6 ಸೆಟ್ಗಳಲ್ಲಿ ಪರಾಭವಗೊಂಡರು.
ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಗೆಲ್ಲಲೇಬೇಕಿದೆ. ಬಳಿಕ 2 ರಿವರ್ಸ್ ಸಿಂಗಲ್ಸ್ನಲ್ಲೂ ಗೆದ್ದರೆ ಮಾತ್ರ ಭಾರತ ಡೇವಿಸ್ ಕಪ್ ಫೈನಲ್ಸ್ಗೆ ಪ್ರವೇಶ ಪಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.