
ನವದೆಹಲಿ (ಜ.18): ಸಾಮಾನ್ಯವಾಗಿ ಯೋಗಿಗಳು ಜಪ-ತಪಗಳಲ್ಲಿ ಕಾಲ ಕಳೆದರೆ ಅಂಥವರಿಗಿಂತ ತಾನು ಭಿನ್ನ ಎಂಬುದನ್ನು ಯೋಗ ಗುರು ಬಾಬಾ ರಾಮದೇವ್ ಆಗಾಗ್ಗೆ ತೋರ್ಪಡಿಸುತ್ತಲೇ ಇರುತ್ತಾರೆ! ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಚಾರಿಟಿ ಪಂದ್ಯವೊಂದರಲ್ಲಿ ಫುಟ್ಬಾಲ್ ಆಡಿ ಗಮನ ಸೆಳೆದಿದ್ದ ರಾಮ್ದೇವ್, ಇದೀಗ ಕುಸ್ತಿ ಆಡಲು ಅದೂ 2008 ರ ಒಲಿಂಪಿಕ್ಸ್ನ ರಜತ ವಿಜೇತ ರಷ್ಯಾ ಕುಸ್ತಿಪಟು ಆಂಡ್ರೆ ಸ್ಟೆಡ್ನಿಕ್ ಜತೆಗೆ ತೊಡೆತಟ್ಟಲು ಸಜ್ಜಾಗಿದ್ದರು.
ಬುಧವಾರ ನವದೆಹಲಿಯಲ್ಲಿ ಮುಂಬೈ ಮತ್ತು ಪಂಜಾಬ್ ನಡುವಣದ ಪ್ರೊ ರೆಸ್ಲಿಂಗ್ ಲೀಗ್ನ ಸೆಮಿಫೈನಲ್ಗೂ ಮುನ್ನ ಈ ಕುಸ್ತಿ ನಡೆಯಲಿತ್ತೆಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.