
ನವದೆಹಲಿ: ಮಾಧ್ಯಮ ಹಾಗೂ ಅಭಿಮಾನಿಗಳೊಂದಿಗೆ ವಿನಯದಿಂದ ವರ್ತಿಸುವಂತೆ ಭಾರತ ತಂಡದ ನಾಯಕ ಕೊಹ್ಲಿಗೆ ಬಿಸಿಸಿಐ ಆಡಳಿತ ಮಂಡಳಿ (ಸಿಒಎ) ಸೂಚಿಸಿದೆ.
ಕೊಹ್ಲಿ, ಇತ್ತೀಚೆಗೆ ಜಾಲತಾಣ ದಲ್ಲಿ ಅಭಿಮಾನಿಯೊಬ್ಬರ ಟ್ವೀಟ್ಗೆ ಪ್ರತಿಯಾಗಿ ಹಾಕಿದ್ದ ವಿಡಿಯೋದಲ್ಲಿ ಅಭಿಮಾನಿಯೊಬ್ಬರಿಗೆ ‘ದೇಶ ಬಿಟ್ಟು ಹೋಗಿ’ ಎಂದು ಹೇಳಿದ್ದು ವೈರಲ್ ಆಗಿತ್ತು.
ಇದರಿಂದ ಕೊಹ್ಲಿ ವಿರುದ್ಧ ಟೀಕೆಗಳು ಬಂದಿದ್ದವು. ಇದನ್ನು ಗಮನದಲ್ಲಿರಿಸಿಕೊಂಡಿರುವ ಸಿಒಎ, ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಬಿಡಬೇಕು ಎಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.