ಭಾರತ ಎ ತಂಡದ ಆಯ್ಕೆ ಮಾಡಿದ ಬೆನ್ನಲ್ಲೇ, ಯುವ ಕ್ರಿಕೆಟಿಗನಿಗೆ ನಿರಾಸೆಯಾಗಿದೆ. ಇದೀಗ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕ್ರಿಕೆಟಿಗ ನಾನೇನು ತಪ್ಪುಮಾಡಿದೆ ಎಂದು ಪ್ರಶ್ನಿಸಿದ್ದಾನೆ.
ಇಂದೋರ್(ಮೇ.15): ಶ್ರೀಲಂಕಾ ಎ ಹಾಗೂ ವೆಸ್ಟ್ ಇಂಡೀಸ್ ಎ ವಿರುದ್ದದ ಸರಣಿಗಾಗಿ ಭಾರತ ಎ ತಂಡ ಪ್ರಕಟಿಸಲಾಗಿದೆ. ತಂಡದ ಆಯ್ಕೆ ರಣಜಿ ಹಾಗೂ ದೇಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಲ್ರೌಂಡರ್ ಜಲಜ್ ಸಕ್ಸೇನಾಗೆ ಆಘಾತ ನೀಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಜಲಜ್ ಸಕ್ಸೇನಾಗೆ ಕೊಕ್ ನೀಡಲಾಗಿದೆ.
ಇದನ್ನೂ ಓದಿ: ವೆಸ್ಟ್ಇಂಡೀಸ್, ಶ್ರೀಲಂಕಾ ಎ ಸರಣಿಗಾಗಿ ಭಾರತ ಎ ತಂಡ ಪ್ರಕಟ!
ಬಿಸಿಸಿಐ ಭಾರತ ಎ ತಂಡ ಪ್ರಕಟಿಸುತ್ತಿದ್ದಂತೆ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಜಲಜ್ ತೀವ್ರ ನಿರಾಸೆಯಾಗಿದೆ. ಹೀಗಾಗಿ ಟ್ವಿಟರ್ ಮೂಲಕ ನೋವು ತೋಡಿಕೊಂಡಿದ್ದಾರೆ. ನಾನೇನು ತಪ್ಪು ಮಾಡಿದೆ? ನನಗ್ಯಾಕೆ ಈ ಶಿಕ್ಷೆ? ಎಂದು ಮೊದಲು ಟ್ವೀಟ್ ಮಾಡಿದ್ದಾರೆ.
What have I done so terribly wrong, to deserve this?
— Jalaj Saxena (@jalajsaxena33)
ಇದನ್ನೂ ಓದಿ: ಧೋನಿ ವಿರುದ್ಧ ತಿರುಗಿ ಬಿದ್ರಾ ಕುಲ್ದೀಪ್ ಯಾದವ್?
ಮೊದಲ ಟ್ವೀಟ್ ಬಳಿಕ ಜಲಜ್, ತಾನು ಯಾಕೆ ಆಯ್ಕೆಯಾಗಬೇಕು ಅನ್ನೋದನ್ನೂ ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ರಣಜಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ್ದೇನೆ. 3000ಕ್ಕೂ ಹೆಚ್ಚು ರನ್ ಸಿಡಿಸಿದ್ದೇನೆ. ದೇಸಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್, ಅತ್ಯುತ್ತಮ ಆಲ್ರೌಂಡರ್ ಹಾಗೂ ಶತಕ ಹಾಗೂ 8 ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದೇನೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
With this 9 wicket match haul against Delhi, I became the highest wicket taker in India in Ranji Trophy in last 5 years with 193 Wickets.With a batting score of 3000 runs with an avg of 46. 3rd Man of the Match this season. pic.twitter.com/SxdDR7pE3c
— Jalaj Saxena (@jalajsaxena33)
Joint Best Bowling figure in Indian domestic Cricket ☑
16 wickets
Best All Round figure in Indian Domestic Cricket ☑
185 runs and 10 wickets
Now: First Indian Cricketer to score a century and get an eight wicket haul in a match twice. ☑
Grateful! Blessed! 🤞🙏 pic.twitter.com/qXYVeFbT4F