ನೆಟ್ ಬಳಿ ಕೋಚ್ ಕುಂಬ್ಳೆಯನ್ನು ನೋಡಿ ಮುಖ ಸಿಂಡರಿಸಿ ಕಾಲ್ಕಿತ್ತ ಕೊಹ್ಲಿ!

Published : Jun 02, 2017, 04:02 PM ISTUpdated : Apr 11, 2018, 12:54 PM IST
ನೆಟ್ ಬಳಿ ಕೋಚ್ ಕುಂಬ್ಳೆಯನ್ನು ನೋಡಿ ಮುಖ ಸಿಂಡರಿಸಿ ಕಾಲ್ಕಿತ್ತ ಕೊಹ್ಲಿ!

ಸಾರಾಂಶ

ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಕಾರ್ಯಕಾರಿ ಸಚಿವ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ ಎಂ. ವಿ ಶ್ರೀಧರ್ ಗುರುವಾರದಂದು ಟೀಂ ಇಂಡಿಯಾದ ಆಟಗಾರರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಈಗಿನ್ನೂ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆಯ ಮೇಲೆ ಆಟಗಾರರಿಗಿರುವ ಅಸಮಾಧಾನದ ಕುರಿತಾಗಿ ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಮಿತಾಬ್ ಚೌಧರಿ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿಯ ನಡುವಿರುವ ಮನಸ್ತಾಪದ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಮುಂಬೈ(ಮೇ.02): ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಕಾರ್ಯಕಾರಿ ಸಚಿವ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ ಎಂ. ವಿ ಶ್ರೀಧರ್ ಗುರುವಾರದಂದು ಟೀಂ ಇಂಡಿಯಾದ ಆಟಗಾರರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಈಗಿನ್ನೂ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆಯ ಮೇಲೆ ಆಟಗಾರರಿಗಿರುವ ಅಸಮಾಧಾನದ ಕುರಿತಾಗಿ ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಮಿತಾಬ್ ಚೌಧರಿ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿಯ ನಡುವಿರುವ ಮನಸ್ತಾಪದ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಯಾವತ್ತು ಟೀಂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್'ಗೆ ತಲುಪಿದಾಗಿನಿಂದ ಕುಂಬ್ಳೆ ಹಾಗೂ ಕೊಹ್ಲಿ ನಡುವಿನ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೂನ್ 4 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧ ಆಡಲಿರುವ ಟೀಂ ಇಂಡಿಯಾದ ಆಟಗಾರರ ಗಮನ ಸಂಪೂರ್ಣವಾಗಿ ಪಂದ್ಯದ ಮೇಲಿರಬೇಕು ಎಂಬುವುದು ಪ್ರಶಂಸಕರ ಇಚ್ಛೆಯಾಗಿದೆ. ಆದರೆ ಬೆಂಗಳೂರು ಮಿರರ್ ಇದೇ ವಿಚಾರವಾಗಿ ವರದಿಯೊಂದನ್ನು ಬಿತ್ತರಿಸಿದ್ದು ಬಾಂಗ್ಲಾ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆಯ ನಡುವೆ ಯಾವುದೇ ಮಾತುಕತೆ ಇಲ್ಲ ಎಂದು ತಿಳಿಸಿದೆ.

ಇಷ್ಟೇ ಅಲ್ಲದೆ ಕೆಲ ಕ್ರಿಕೆಟ್ ಪರಿಕರಗಳೊಂದಿಗೆ ಅನಿಲ್ ಕುಂಬ್ಳೆ ಪ್ರ್ಯಾಕ್ಟೀಸ್ ನೆಟ್ ಬಳಿ ಬರುತ್ತಿದ್ದಂತೆಯೇ, ಟೀಂ ಇಂಡಿಯಾದ ಕ್ಯಾಪ್ಟನ್ ನೆಟ್'ನಿಂದ ಹೊರ ಸರಿದಿದ್ದಾರೆ ಎಂಬುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿ ನಡುವಿನ ಮನಸ್ತಾಪ ದೂರವಾಗಿ ಇಬ್ಬರ ಸಂಬಂಧ ಸರಿಯಾಗಲಿ ಎಂಬುವುದೇ ಭಾರತೀಯರ ಆಶಯವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ
ಐಸಿಸಿ ಟಿ20 ವಿಶ್ವಕಪ್ 2026: ಸೆಮಿಫೈನಲ್ ಕದನಕ್ಕೆ ಅಖಾಡ ಸಿದ್ದ! ಫೈನಲ್ ಯಾವಾಗ?