
ನವದೆಹಲಿ (ಮಾ.13): ಭಾರತೀಯ ಕುಸ್ತಿಪಟುಗಳೆಂದು ನಂಬಿಸಿ 11 ಮಂದಿ ನಕಲಿ ದಾಖಲೆಗಳೊಂದಿಗೆ ಹಂಗೇರಿ ವೀಸಾಗೆ ಅರ್ಜಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಂಚಕ ಜಾಲದ ಹಿಂದೆ ಮಾನವ ಕಳ್ಳಸಾಗಣೆಯ ಶಂಕೆ ವ್ಯಕ್ತವಾಗಿದೆ.
ಮಾ.15ರಿಂದ 22ರವರೆಗೆ ಬುಡಾಪೆಸ್ಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಭಾಗವಹಿಸುವುದಕ್ಕೆ ಭಾರತ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ)ನ ಲೆಟರ್ ಹೆಡ್ ಬಳಸಿ, 11 ಮಂದಿಗೆ ವೀಸಾ ನೀಡುವಂತೆ ಹಂಗೇರಿಯಾ ರಾಯಭಾರಿ ಕಚೇರಿಗೆಗೆ ಶಿಪಾರಸು ಪತ್ರ ನೀಡಿ ವೀಸಾ ನೀಡುವಂತೆ ಕೋರಲಾಗಿದೆ.
ಇದನ್ನೂ ಓದಿ: ವಿಶ್ವ ಕುಸ್ತಿಯಲ್ಲಿ ಆತಂಕ; ಭಾರತದ ಮೇಲೆ ನಿಷೇಧ?
ಆದರೆ ಅರ್ಜಿಯಲ್ಲಿದ್ದ ಕೆಲ ತಪ್ಪುಗಳಿಂದಾಗಿ ಅನುಮಾನಗೊಂಡು ದೂತವಾಸ ಕಚೇರಿಯು ಡಬ್ಲ್ಯುಎಫ್ಐಗೆ ಸತ್ಯಾಸತ್ಯತೆ ಪರಿಶೀಲನೆ ಕೋರಿ ಇಮೇಲ್ ಕಳುಹಿಸಿತ್ತು. ಈ ವೇಳೆ ಫೆಡರೇಷನ್ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್, ಅಂತಹ ಯಾವುದೇ ಪತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಸಂಜಯ್ ಪ್ರತಿಕ್ರಿಯಿಸಿದ್ದು, ‘ಇದು ಮಾನವ ಕಳ್ಳಸಾಗಣೆಗೆ ಸಂಬಂಧಪಟ್ಟಿರಬಹುದು. ಫೆಡರೇಷನ್ ಹೆಸರಿನಲ್ಲಿ ನಕಲಿ ದಾಖಲೆ ಬಳಸಿಕೊಂಡು ಕ್ರೀಡಾಪಟುಗಳೆಂದು ನಟಿಸಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ್ದಾರೆ ಎನ್ನುವ ಸಂಶಯವಿದೆ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.