
ನವದೆಹಲಿ (ಸೆ.20): ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದೆ. ಅದರೊಂದಿಗೆ ಸ್ಲೀಪ್ ಮೋಡ್ನಲ್ಲಿದ್ದ ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ನನ್ನು ಎಬ್ಬಿಸುವ ಕಾರ್ಯ ಕೂಡ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನಲ್ಲಿ ಕತ್ತಲು ಆವರಿಸಿದ ಕಾರಣ ದಕ್ಷಿಣ ಧ್ರುವದಲ್ಲಿ ವಿವಿಧ ಸಂಶೋಧನಾ ಕಾರ್ಯದಲ್ಲಿದ್ದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಕಳೆದ 15 ದಿನಗಳಿಂದ ನಿದ್ರೆಗೆ ಇಳಿದಿದ್ದರು. ಆದರೆ, ಶಿವಶಕ್ತಿ ಪಾಯಿಂಟ್ನಲ್ಲಿ ಈಗ ಸೂರ್ಯೋದಯ ಆಗತ್ತಿರುವ ಕಾರಣ ಈ ಇವರಿಬ್ಬರ ಕಾರ್ಯಾಚರಣೆಯ ಕಂಡೀಷನ್ ಇನ್ನಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯ ಆರಂಭವಾಗಿದೆ ಮತ್ತು ಬ್ಯಾಟರಿಗಳು ರೀಚಾರ್ಜ್ ಮಾಡಲು ಅವರು ಕಾಯುತ್ತಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ. ವಿಕ್ರಮ್ ಮತ್ತು ಪ್ರಗ್ಯಾನ್ ಅವರೊಂದಿಗೆ ಸಂವಹನವನ್ನು ಮರುಸ್ಥಾಪಿಸುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರ್ಯೋದಯವು ಕಾರ್ಯಾಚರಣೆಗೆ ನಿರ್ಣಾಯಕ ಕ್ಷಣವಾಗಿದೆ ಏಕೆಂದರೆ ಇದು ಲ್ಯಾಂಡರ್ ಮತ್ತು ರೋವರ್ ಕಾರ್ಯನಿರ್ವಹಿಸಲು ಅಗತ್ಯವಾದ ಸೋಲಾರ್ ಇಂಧನವನ್ನು ಒದಗಿಸುತ್ತದೆ. ಸೆಪ್ಟೆಂಬರ್ 22 ರಂದು ಸಂವಹನ ಪ್ರಯತ್ನಗಳನ್ನು ಇಸ್ರೋ ಆರಂಭ ಮಾಡಲಿದೆ. ಅದಕ್ಕೂ ಮೊದಲು ತಾಪಮಾನವು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗುವವರೆಗೆ ಕಾಯುವುದಾಗಿ ಇಸ್ರೋ ಹೇಳಿದೆ.
ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ-3 ಮಿಷನ್ ಈಗಾಗಲೇ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಇದು ಭಾರತವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ನಾಲ್ಕನೇ ದೇಶವೆಂದು ಗುರುತಿಸಿತು ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿತು. ಈ ವೈಜ್ಞಾನಿಕವಾಗಿ ಪ್ರದೇಶವನ್ನು ಅನ್ವೇಷಿಸುವುದು ಮಿಷನ್ನ ಪ್ರಾಥಮಿಕ ಉದ್ದೇಶವಾಗಿದೆ, ಇದು ಗಣನೀಯ ಪ್ರಮಾಣದ ಹೆಪ್ಪುಗಟ್ಟಿದ ನೀರನ್ನು ಹೊಂದಿದೆ ಎಂದು ನಂಬಲಾಗಿದೆ.
ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಆಗಸ್ಟ್ 23 ರಂದು ಲ್ಯಾಂಡಿಂಗ್ ಆದ ನಂತರ ವಿವಿಧ ಪ್ರಯೋಗಗಳನ್ನು ನಡೆಸುತ್ತಿದೆ. ಇವರಿಬ್ಬರೂ ಚಂದ್ರನ ನೆಲದಲ್ಲಿ ಎಲೆಕ್ಟ್ರಾನ್ ಸಾಂದ್ರತೆಯನ್ನು ಅಳೆದಿದ್ದಾರೆ ಮತ್ತು ಚಂದ್ರನ ಮೇಲ್ಮೈಯ ತಾಪಮಾನದ ಮಾಹಿತಿಯನ್ನು ತೆಗೆದುಕೊಂಡಿದ್ದಾರೆ. ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ನ ಮೊದಲ ಚಿತ್ರವನ್ನು ಸಹ ಸೆರೆಹಿಡಿಯಿತು.
ಚಂದ್ರನ ಮೇಲೆ ನೀರು ಸಾಧ್ಯವಿದೆ, ಚಂದ್ರಯಾನ-1 ಡೇಟಾದಿಂದ ಸಿಕ್ಕಿತು ಮಹತ್ವದ ಮಾಹಿತಿ!
ಹಾಗಿದ್ದರೂ ಸೌರಶಕ್ತಿ ಚಾಲಿತ ವಾಹನಗಳ ಬ್ಯಾಟರಿಗಳು ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ತಮ್ಮ ವ್ಯವಸ್ಥೆಗಳನ್ನು ಚಲಾಯಿಸಲು ಸಾಕಷ್ಟು ಶಕ್ತಿಯುತವಾಗಿಲ್ಲದ ಕಾರಣ ಚಂದ್ರನ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಚಂದ್ರನಲ್ಲಿ ಕತ್ತಲು ಬಹಳ ಶೀತಮಯವಾಗಿರುತ್ತದೆ. ಇದನ್ನು ಎದುರಿಸಿ ನಿಲ್ಲಲು ಸಧ್ಯವಾದರೆ, ಮಿಷನ್ ತನ್ನ ಅದ್ಭುತ ಸಂಶೋಧನೆಗಳನ್ನು ಮತ್ತೆ ಆರಂಭಿಸುವ ಭರವಸೆಯನ್ನು ಇದ್ರೋ ಹೊಂದಿದೆ. ವಿಕ್ರಮ್ ಮತ್ತು ಪ್ರಗ್ಯಾನ್ ಜೊತೆಗಿನ ಯಶಸ್ವಿ ಮರುಸಂಪರ್ಕವು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಅದರ ಸ್ಥಿತಿಸ್ಥಾಪಕತ್ವ ಮತ್ತು ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುವ ಮೂಲಕ ಇಸ್ರೋಗೆ ಮತ್ತೊಂದು ಗರಿಯಾಗಿದೆ. ಜಗತ್ತು ವೀಕ್ಷಿಸುತ್ತಿರುವಂತೆ, ಶಿವಶಕ್ತಿ ಪಾಯಿಂಟ್ನ ಸೂರ್ಯೋದಯವು ಚಂದ್ರನ ಅನ್ವೇಷಣೆಯಲ್ಲಿ ಹೊಸ ಅಧ್ಯಾಯದ ಉದಯವನ್ನು ಗುರುತಿಸಬಹುದು.
ಚಂದ್ರಯಾನ, ಸೂರ್ಯಯಾನ ಬಳಿಕ ಸಮುದ್ರಯಾನ: ಮತ್ಸ್ಯದಿಂದ ಆಳ ಸಮುದ್ರದಲ್ಲಿ ಸಂಶೋಧನೆ
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.