
ಶ್ರೀಹರಿಕೋಟಾ(ಜು.30) ಮಹತ್ವಾಕಾಂಕ್ಷಿ ಚಂದ್ರಯಾನ 3 ಯಶಸ್ವಿ ಉಡಾವಣೆ ಮಾಡಿರುವ ಇಸ್ರೋ ಇದೀಗ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ಸಿದ್ದತೆಯಲ್ಲಿದೆ. ಇದರ ನಡುವೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಸಾಧನೆ ಮಾಡಿದ್ದರೆ. ಇಸ್ರೋ ಹಾಗೂ ಸಿಂಗಾಪೂರ ಸರ್ಕಾರ ಜಂಟಿಯಾಗಿ ಅಭಿವೃದ್ದಿಪಡಿಸಿದ ಭೂಮಿ ಪರಿಶೀಲನಾ ಉಪಗ್ರಹ ಸೇರಿದಂತೆ 7 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ಇಸ್ರೋದ ಪಿಎಸ್ಎಲ್ವಿ ರಾಕೆಟ್ ಮೂಲಕ ಈ ಸ್ಯಾಟಲೈಟ್ಗಳನ್ನು ಉಡಾವಣೆ ಮಾಡಲಾಗಿದೆ.
ಸಿಂಗಾಪುರದ ಡಿಎಸ್-ಎಸ್ಎಆರ್ ಉಪಗ್ರಹ ಮತ್ತು ಇತರೆ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಪಗ್ರಹ ಉಡಾವಣೆಗೆ ಖಾಸಗಿಯವರಿಗೂ ಅವಕಾಶ ಒದಗಿಸುವ ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಅಡಿಯಲ್ಲಿ ಉಡಾವಣೆ ಮಾಡಲಾಗಿದೆ. ಒಟ್ಟು 7 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ- ಸಿ56 ರಾಕೆಟ್ ಶ್ರೀಹರಿಕೋಟಾದ ಮೊದಲ ಲಾಂಚ್ಪ್ಯಾಡ್ನಿಂದ ಇಂದು ಬೆಳಗ್ಗೆ 6.30ಕ್ಕೆ ನಭಕ್ಕೆ ಹಾರಿದೆ. ಬಳಿಕ ಈ ಉಪಗ್ರಹಗಳನ್ನು ನಿಯರ್ ಈಕ್ವೆಟೋರಿಯಲ್ ಕಕ್ಷೆಯಲ್ಲಿ (ಭೂಮಿಯಿಂದ ಸುಮಾರು 535 ಕಿ.ಮೀ. ದೂರ) ಸ್ಥಾಪಿಸಲಾಗುತ್ತದೆ. ಡಿಎಸ್-ಎಸ್ಆರ್ ಉಪಗ್ರಹವನ್ನು ಎಸ್ಟಿ ಎಂಜಿನಿಯರಿಂಗ್ ಸಂಸ್ಥೆಯ ಜೊತೆ ಸೇರಿ ಸಿಂಗಾಪುರದ ಭದ್ರತಾ ಇಲಾಖೆ ನಿರ್ಮಾಣ ಮಾಡಿದ್ದು, ಇದು ಭದ್ರತೆ, ಲೊಕೇಶನ್ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.
Chandrayaan 3: ಇಸ್ರೋಗೆ ಮತ್ತಷ್ಟು ಯಶಸ್ಸು: ಐದನೇ ಭೂಕಕ್ಷೆ ಪೂರ್ಣ; ಚಂದ್ರನಿಗೆ ಮತ್ತಷ್ಟು ಹತ್ತಿರವಾಗ್ತಿದೆ ನೌಕೆ
ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಇಸ್ರೋ ಉಡಾವಣೆ ಮಾಡಿದ ಬೆನ್ನಲ್ಲೇ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಭಾರತ ಹಾಗೂ ಸಿಂಗಾಪುರ ಜಂಟಿಯಾಗಿ ಅಭಿವೃದ್ಧಿಪಡಿಸಿದ ಉಪಗ್ರಹಗಳ ಉಡಾವಣೆಯನ್ನು ಇಸ್ರೋ ಮಾಡಿದೆ. ಈ ಮೂಲಕ ಭಾರತ ಹಾಗೂ ಸಿಂಗಾಪುರದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದಿದೆ. ಭಾರತ ಹಾಗೂ ಸಿಂಗಾಪುರ ಬಾಹ್ಯಾಕಾಶ ಜಂಟಿ ಯೋಜನೆ ಇಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನ್ ಬಣ್ಣಿಸಿದೆ.
ಈ ಉಡ್ಡಯನ ಇದೇ ತಿಂಗಳು ನಡೆಯುತ್ತಿರುವ ಇಸ್ರೋದ 2ನೇ ಉಡಾವಣೆಯಾಗಿದೆ. ಇದಕ್ಕೂ ಮೊದಲು ಜು.14ರಂದು ಚಂದ್ರಯಾನ-3 ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.ಚಂದ್ರಯಾನ-3 ನೌಕೆ ಮುಂದಿನ ಹಂತದಲ್ಲಿ ಆ.1ರಂದು ಮಧ್ಯರಾತ್ರಿ 12 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ನೌಕೆಯು ಭೂಮಿಯನ್ನು ಸುತ್ತುವರೆಯುವುದನ್ನು ಬಿಟ್ಟು, ಚಂದ್ರನ ಕಡೆಗೆ ಪ್ರಯಾಣ ಬೆಳೆಸಲಿದೆ. ಹೀಗೆ ಚಂದ್ರನ ಕಕ್ಷೆಯ ಸುತ್ತ ಕೆಲ ದಿನಗಳ ಕಾಲ ಸುತ್ತಲಿರುವ ನೌಕೆಯನ್ನು ಬಳಿಕ ಆ.23ರಂದು ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್್ಟಲ್ಯಾಂಡ್ ಮಾಡುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ.
Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್ನಲ್ಲಿ ಸೆರೆಯಾಯ್ತು ಚಂದ್ರಯಾನ!
ಇದುವರೆಗೂ ವಿಶ್ವದ ಯಾವುದೇ ದೇಶ ಕೂಡಾ ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ತಮ್ಮ ನೌಕೆಯನ್ನು ಕಳುಹಿಸಿಲ್ಲ. ಹೀಗಾಗಿ ಭಾರತದ ಚಂದ್ರಯಾನ 3 ನೌಕೆಯ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.