'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ!

Suvarna News   | Asianet News
Published : Dec 21, 2020, 02:06 PM ISTUpdated : Dec 21, 2020, 02:14 PM IST
'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ!

ಸಾರಾಂಶ

ಜೀ ಕನ್ನಡ ಸರಿಗಮಪ ಸೀಸನ್‌ 17ರ ವಿನ್ನರ್ ಹಾಗೂ ರನ್ನರ್ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಬಿದ್ದಿದೆ ತೆರೆ. ಕಿರೀಟ ಮುಡಿಗೇರಿಸಿಕೊಂಡವರು ಯಾರು? 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸುಪ್ರಸಿದ್ಧ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್‌ 17ರ ಗ್ರ್ಯಾಂಡ್‌ ಫಿನಾಲೆ ಡಿಸೆಂಬರ್ 20ಕ್ಕೆ ಮುಗಿದಿದೆ. ಫಿನಾಲೆ ಹಂತ ತಲುಪಿದ ಐವರು ಸ್ಪರ್ಧಿಗಳು, ವಿಜೇತರು ಮೂವರು. ಯಾರಿಗೆ ಯಾವ ಸ್ಥಾನ ಇಲ್ಲಿದೆ ನೋಡಿ...

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಆರ್ಯವರ್ಧನ್? 

ಜೀವನ ಚೈತ್ರಾ ಚಿತ್ರದ 'ನಾದಮಯ' ಹಾಗೂ 'ನಟನವಿ ಶಾರದೆ ನಟಶೇಖರ' ಹಾಡನ್ನು ಹಾಡಿ ಶ್ರೀನಿಧಿ ಶಾಸ್ತ್ರಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀನಿಧಿಗೆ ಟ್ರೋಫಿ ಜೊತೆಗೆ 10 ಲಕ್ಷ ರೂ ಬಹುಮಾನ ನೀಡಲಾಗಿದೆ. ಅಶ್ವಿನ್ ಶರ್ಮಾ ಎರನಡೇ ಸ್ಥಾನ ಪಡೆದು, 5 ಲಕ್ಷ ರೂ ಪಡೆದರು ಹಾಗೂ ಕಂಬದ ರಂಗಯ್ಯ ಮೂರನೇ ಸ್ಥಾನ ಪಡೆದು 2 ಲಕ್ಷ ರೂ. ಗೆದ್ದಿದ್ದಾರೆ.

"

ಶಾರದಿ ಪಾಟೀಲ್, ಅಶ್ವಿನ್ ಶರ್ಮಾ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ ಹಾಗೂ ಕಂಬದ ರಂಗಯ್ಯ  ಫಿನಾಲೆ ತಲುಪಿದ್ದರು. ಫಿನಾಲೆ ಕಾರ್ಯಕ್ರಮದಲ್ಲಿ ರತ್ನಮ್ಮ ಹಾಗೂ ಮಂಜಮ್ಮ ಅವರ ವಿಶೇಷ ಕಾರ್ಯಕ್ರಮಿತ್ತು. ದಿವಂಗತ ಗಾಯಕ ಎಸ್‌ಪಿಬಿಯನ್ನು ನೆನೆದು ಕಾರ್ಯಕ್ರಮ ಆಂಭಿಸಲಾಗಿತ್ತು.

ಮನೆಯಲ್ಲಿ ಹಣ ಕದ್ದು ಶಾಪಿಂಗ್ ಮಾಡಿದ ಪ್ರಿಯಾಂಕ; ಇದೇ 'ಸತ್ಯ' ಕತೆ! 

ಪ್ರತಿ ಸೀಸನ್‌ 3 ತಿಂಗಳೊಳಗೆ ಮುಕ್ತಾಯವಾಗುತ್ತದೆ. ಆದರೆ ಈ ಬಾರಿ ಲಾಕ್‌ಡೌನ್‌ ಇದ್ದ ಕಾರಣ ಅತಿ ಹೆಚ್ಚು ಅವಧಿ ತೆಗೆದುಕೊಂಡ ರಿಯಾಲಿಟಿ ಶೋ ಸೀಸನ್‌ ಇದಾಯಿತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?