
ನಿತೇಶ್ ತಿವಾರಿಯವರ ರಾಮಾಯಣದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸಲಿರೋದು ಗೊತ್ತೇ ಇದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ ನಟಿಸಿದರೆ, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕ್ರಮವಾಗಿ ಮಾತಾ ಸೀತೆ ಮತ್ತು ಭಗವಾನ್ ಹನುಮಾನ್ ಆಗಿ ಕಾಣಿಸಿಕೊಳ್ಳುತ್ತಾರೆ.
ಹೊಸ ವಿಷಯ ಎಂದರೆ, ಈ ರಾವಣನಾಗಲು ಯಶ್ ತೂಕ ಹೆಚ್ಚಿಸುತ್ತಾರಂತೆ, ಅದೂ ಬರೋಬ್ಬರಿ 15 ಕೆಜಿ. ಯಶ್ ಇಷ್ಟೊಂದು ತೂಕ ಏರಿದಾಗ ಹೇಗೆ ಕಾಣಬಹುದು ಎಂದು ಊಹಿಸತೊಡಗಿದಿರಿ ಅಲ್ಲವೇ? ಅಷ್ಟೇ ಅಲ್ಲ, ರಾವಣನ ಅಭಿನಯದ ಬಳಿಕ ಕೆಜಿಎಫ್ 3ಗಾಗಿ ಮತ್ತೆ ಯಶ್ 15 ಕೆಜಿ ತೂಕ ಕಳೆದುಕೊಳ್ಳಬೇಕಿದೆ.
ನಟ ಪ್ರಸ್ತುತ ಬೆಂಗಳೂರು, ಮುಂಬೈ ಮತ್ತು ಲಂಡನ್ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಗೀತು ಮೋಹನ್ದಾಸ್ ಅವರ ಟಾಕ್ಸಿಕ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಟಾಕ್ಸಿಕ್ ನಂತರ, ಯಶ್ ರಾಮಾಯಣಕ್ಕೆ ಜಿಗಿಯುತ್ತಾರೆ ಮತ್ತು ಅದರ ನಂತರವೇ ಅವರು ಸೂಪರ್-ಯಶಸ್ವಿಯಾದ ಕೆಜಿಎಫ್ ಫ್ರ್ಯಾಂಚೈಸ್ನ ಮೂರನೇ ಕಂತಿನ ಕೆಲಸವನ್ನು ಪ್ರಾರಂಭಿಸುತ್ತಾರೆ.
ಒತ್ತಡ ಹೆಚ್ಚಿದ್ಯಾ? ಹೈರಾಣಾಗಿದ್ದೀರಾ? ನಟ ಮಾಧವನ್ ಅನುಸರಿಸೋ ಒತ್ತಡ ನಿವಾರಣೆ ತಂತ್ರಗಳಿವು..
ಏತನ್ಮಧ್ಯೆ, ನಿತೇಶ್ ತಿವಾರಿ ಅವರ ರಾಮಾಯಣದ ಚಿತ್ರೀಕರಣ ಪ್ರಾರಂಭವಾಗಿದೆ. ಅರುಣ್ ಗೋವಿಲ್, ಲಾರಾ ದತ್ತಾ ಮತ್ತು ಹೆಚ್ಚಿನವರು ತಮ್ಮ ಭಾಗಗಳನ್ನು ಚಿತ್ರೀಕರಿಸುತ್ತಿದ್ದಾರೆ. ಪ್ರಮುಖ ಪಾತ್ರವರ್ಗ - ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ - ಕೂಡ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದ್ದಾರೆ. ನಂತರದ ವೇಳಾಪಟ್ಟಿಯಲ್ಲಿ ಯಶ್ ಸೇರುವ ನಿರೀಕ್ಷೆಯಿದೆ. ಇತ್ತೀಚಿನ ವರದಿಗಳ ಪ್ರಕಾರ, ರಣಬೀರ್ ಕೂಡ, ಅನಿಮಲ್ ಚಿತ್ರದ ಬಳಿಕ, ಭಗವಾನ್ ರಾಮನ ಪಾತ್ರವನ್ನು ಪಡೆಯಲು ಕಠಿಣ ದೈಹಿಕ ದಿನಚರಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.