ಆ ಗಾಯಕನಿಗಾಗಿ ಮಿಡಿದ ಈ ಗಾಯಕನ ಹೃದಯ; ಕೇಳಲೇ ಬೇಕು 'ಮೇಲೊಬ್ಬ ಮಾಯಾವಿ'!

Suvarna News   | Asianet News
Published : Apr 13, 2020, 04:35 PM IST
ಆ ಗಾಯಕನಿಗಾಗಿ ಮಿಡಿದ ಈ ಗಾಯಕನ ಹೃದಯ; ಕೇಳಲೇ ಬೇಕು 'ಮೇಲೊಬ್ಬ ಮಾಯಾವಿ'!

ಸಾರಾಂಶ

ಖ್ಯಾತ ಗಾಯಕ ದಿವಂಗತ ಎಲ್ ಎನ್ ಶಾಸ್ತ್ರಿ  ಅವರ ಕಟ್ಟಕಡೆಯ ಹಾಡನ್ನು ಕೇಳಿ ಎಂದು ಮನವಿ ಮಾಡಿದ ವಿಜಯ್ ಪ್ರಕಾಶ್. 

1991ರಲ್ಲಿ 'ಅಜಗಜಾಂತರ' ಚಿತ್ರದ ಮೂಲಕ ಪ್ಲೇಬ್ಯಾಕ್‌ ಗಾಯಕನಾಗಿ ವೃತ್ತಿ ಆರಂಭಿಸಿದ ಎಲ್‌ ಎನ್‌ ಶಾಸ್ತ್ರಿ ಕನ್ನಡ ಚಿತ್ರರಂಗದಲ್ಲಿ  ಸುಮಾರು 3000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಶಾಸ್ತ್ರಿ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಜನುಮದ ಜೋಡಿ ಚಿತ್ರದ 'ಕೋಲುಮಂಡೆ ಜಂಗಮದೇವ' ಹಾಡು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಾಸ್ತ್ರಿ ಅವರು ಆಗಸ್ಟ್‌ 30,1971ರಂದ ಕೊನೆ ಉಸಿರೆಳೆದಿದ್ದಾರೆ. ಅದಕ್ಕೂ ಮುನ್ನ ಅವರು  ಹಾಡಿದ ಕಟ್ಟ ಕಡೆಯ ಹಾಡನ್ನು ಈಗ ಬಿಡುಗಡೆ ಮಾಡಲಾಗಿದೆ. 

ಸಂಚಾರಿ ವಿಜಯ್ ಅಭಿನಯ 'ಮೇಲೊಬ್ಬ ಮಾಯಾವಿ' ಚಿತ್ರದ  'ಕಲ್ಲ ಕೊಳಲ  ಹಿಡಿದವನೊಬ್ಬ ಗೋಪಾಲ' ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಕ್ರವರ್ತಿ ಚಂದ್ರಚೂಡ್  ಅವರು ಬರೆದಿರುವ ಸಾಹಿತ್ಯವನ್ನು ಎಲ್‌ ಎನ್‌ ಶಾಸ್ತ್ರಿ ಅವರ ಧ್ವನಿಯಲ್ಲಿ ಕೇಳಿರುವ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಎಲ್ ಎನ್  ಶಾಸ್ತ್ರಿ ಅವರ ಕೊನೆಯ ಹಾಡು ಇದಾಗಿದ್ದು ಎಲ್ಲರೂ ದಯವಿಟ್ಟು ಇದನ್ನು ವೀಕ್ಷಿಸಬೇಕೆಂದು ಗಾಯಕ ವಿಜಯ್ ಪ್ರಕಾಶ್  ಮನವಿ ಮಾಡಿಕೊಂಡಿದ್ದಾರೆ. 'ಶಾಸ್ತ್ರಿ ಅವರ ಕಡೆಯ ಹಾಡಿದು ಅಂತ ಹೇಳೋಕೆ ಕಷ್ಟವಾಗುತ್ತದೆ ಅವರು ನಮಗೋಸ್ಕರ ಬಿಟ್ಟು  ಹೋದಂತಹ ಸುಂದರವಾದ ಹಾಡಿದು. ದಯವಿಟ್ಟು ನೀವೆಲ್ಲರೂ ಇದನ್ನು ಕೇಳಿ , ಶೇರ್ ಮಾಡಿ, ವೈರಲ್ ಮಾಡಿ. ಇದೇ ನಾವು ಅವರಿಗೆ ಪ್ರೀತಿಯಿಂದ  ನೀಡುವ ಸಣ್ಣ ಗೌರವ ' ಎಂದು ವಿಜಯ್ ಪ್ರಕಾಶ್ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇದು ಟಾಕ್ಸಿಕ್‌ ಅಲ್ಲ, ಸ್ವೀಟ್‌ ಸುದ್ದಿ.. ಯಶ್‌ಗಾಗಿ ರಾಧಿಕಾ ಪಂಡಿತ್‌ ಬರೆದ ಮನಮೋಹಕ ಸಂದೇಶ ವೈರಲ್!
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್