ಕನ್ನಡ ಕಿರು ಚಿತ್ರೋತ್ಸವಕ್ಕೆ ದಿನಗಣನೆ: ಯಾವಾಗ..? ಎಲ್ಲಿ..? ಇಲ್ಲಿದೆ ಡೀಟೆಲ್ಸ್

By Suvarna NewsFirst Published Jan 28, 2021, 3:54 PM IST
Highlights

ಇದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಕಿರು ಚಿತ್ರೋತ್ಸವ ನಡೆಯಲಿದೆ. ಯಾವಾಗ..? ಎಲ್ಲಿ..? ಯಾರೆಲ್ಲಾ ಬರ್ತಾರೆ..? ಇಲ್ಲಿ ಓದಿ

ಬೆಂಗಳೂರಿನಲ್ಲಿ ಜನವರಿ 30ರ ಶನಿವಾರದಂದು ಕನ್ನಡ ಕಿರು ಚಿತ್ರೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣ ಕಿರುಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಜರಗಲಿದೆ.

ಕನ್ನಡ ಪ್ರಭ ದಿನ ಪತ್ರಿಕೆ ಸಂಪಾದರಕಾದ ರವಿ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಟಿ. ಎನ್. ಸೀತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮನುಷ್ಯ ಬೆಳೀತಾ ಬೆಳೀತಾ ಭ್ರಷ್ಟನಾಗುತ್ತಾನೆ; ನಟ ಧನಂಜಯ್ ಭಾಷಣ ವೈರಲ್!

ಕನ್ನಡ ಪ್ರಭ ಪುರವಣಿ ಸಂಪಾದಕರಾದ ಜೋಗಿ ಹಾಗೂ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಮುಖ್ಯ ಅತಿಥಿಗಳಾಗಿ ಭಾವಹಿಸಲಿದ್ದಾರೆ. ಜನವರಿ 30ರ ಸಂಜೆ ಕಾರ್ಯಕ್ರಮ ನಡೆಯಲಿದೆ.

ಸಂಗೀತ ನಿರ್ದೇಶಕ ವಿ. ಮನೋಹರ್, ಖ್ಯಾತ ಬರಹಗಾರ್ತಿ ಬಿ.ಯು.ಗೀತಾ, ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

click me!