
ಬೆಂಗಳೂರು (ಮಾ. 01): 11 ನೇ ಚಿತ್ರೋತ್ಸವದಲ್ಲಿ ಮೂಕಜ್ಜಿಯ ಕನಸು ಚಿತ್ರ ಅತ್ಯುತ್ತಮ ಕನ್ನಡ ಚಲನಚಿತ್ರ ವಿಬಾಗದ ಪ್ರಶಸ್ತಿಗೆ ಭಾಜನವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮನರಂಜನಾ ಚಿತ್ರ ವಿಭಾಗದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ.
ಶಿವಣ್ಣ, ಪುನೀತ್, ಯಶ್, ದರ್ಶನ್ ಎಲ್ಲಿದೀರಾ? ಕಣ್ಣೀರಿಟ್ಟ ನಾಗಮಂಡಲ ನಟಿ!
ಎರಡನೇ ಉತ್ತಮ ಚಿತ್ರ ಪ್ರಶಸ್ತಿಗೆ ಸಾವಿತ್ರಿ ಬಾ ಪುಲೆ, ಮೂರನೇ ಪ್ರಶಸ್ತಿಗೆ ರಾಮನ ಸವಾರಿ ಚಿತ್ರ ಭಾಜನವಾಗಿದೆ.
ಎಂಟರ್ ಟೇನ್ಮೆಂಟ್ ಚಿತ್ರ ವಿಭಾಗದಲ್ಲಿ ರಾಕಿ ಭಾಯ್ ಅಬ್ಬರಿಸಿದ್ದಾರೆ. ಕೆಜಿಎಫ್ ಮೊದಲ ಸ್ಥಾನ ಪಡೆದಿದೆ. ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎರಡನೇ ಪ್ರಶಸ್ತಿ ಪಡೆದುಕೊಂಡಿದೆ. ಶಿವಣ್ಣ ಟಗರು ಸಿನಿಮಾ ಮೂರನೇ ಸ್ಥಾನ ಪಡೆದಿದೆ.
ಕಾರ್ತಿಕ್ ಗೆ ಜೋಡಿಯಾಗಿ ತಮಿಳಿಗೂ ರಶ್ಮಿಕಾ ಮಂದಣ್ಣ ಎಂಟ್ರಿ?
ವಿಭಿನ್ನ ಕಥಾಹಂದರ ಹೊಂದಿರುವ ’ನಾತಿಚರಾಮಿ’ ಚಿತ್ರ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.