
ಜೊತೆಗೆ ಅರುಣ್ ಗೌಡ ಫೌಂಡೇಶನ್ ಮೂಲಕ ಆಕ್ಸಿಜನ್ ಸಪ್ಲೈ, ಅವಶ್ಯಕತೆ ಇರುವವರಿಗೆ ಫುಡ್ ಕಿಟ್ ಪೂರೈಸುತ್ತಿದ್ದಾರೆ. ಬಿಬಿಎಂಪಿಯ ಸಹಕಾರದೊಂದಿಗೆ ಈ ಹೆಜ್ಜೆ ಇಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಮಾಡಿರೋ ಫೋಟೋ ಪೋಸ್ಟ್ ಮಾಡಿದ್ರೆ ಬಹಳ ಮಂದಿ ವಿರೋಧಿಸುತ್ತಾರೆ. ಆದರೆ ಅಂಥವರು ಅಪ್ಪಿತಪ್ಪಿಯೂ ಸಹಾಯ ಮಾಡಲ್ಲ. ಬರೀ ವಿರೋಧಿಸುವುದರಲ್ಲೇ ಕಾಲ ಕಳೆಯುತ್ತಾರೆ.- ಅರುಣ್ ಗೌಡ, ನಟ
ತಮ್ಮ ಈ ಕೆಲಸದ ಬಗ್ಗೆ ಮಾತನಾಡುವ ಅರು ಗೌಡ, ‘ನನಗೆ ಮೊದಲಿಂದಲೇ ಕಷ್ಟದಲ್ಲಿರುವವರಿಗೆ ಕಿಂಚಿತ್ತಾದರೂ ಸಹಾಯ ಮಾಡಬೇಕೆಂಬ ತುಡಿತ ಇತ್ತು. ನಾನು ಎಲ್ಲರಿಗೂ ಹೇಳೋದು, ನಿಮ್ಮ ಸಂಪಾದನೆಯ ಒಂದು ಭಾಗವನ್ನು ಇಂಥಾ ಸಹಾಯಕ್ಕೆ ಮೀಸಲಿಡಿ. ಆಗ ನಿಮ್ಮ ಹಣಕ್ಕೂ ಮೌಲ್ಯ ಬರುತ್ತದೆ. ಹಸಿದ ಹೊಟ್ಟೆಗಳೂ ತಂಪಾದ ಹಾಗಾಗುತ್ತೆ. ನಮ್ಮ ಈ ಕೆಲಸವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದನ್ನ ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ನನಗಿದು ತಪ್ಪು ಅನಿಸೋದಿಲ್ಲ. ಬದಲಿಗೆ ಇದನ್ನು ನೋಡಿ ಇನ್ನೊಂದಿಷ್ಟು ಜನ ಸಹಾಯಕ್ಕೆ ಮುಂದೆ ಬರಲಿ ಅಂತನಿಸುತ್ತದೆ’ ಅಂತಾರೆ.
ಸಿನಿಮಾದ ಜೊತೆಗೆ ಬ್ಯುಸಿನೆಸ್ನಲ್ಲೂ ತೊಡಗಿಸಿಕೊಂಡಿರುವ ಅರು ಗೌಡ ಸದ್ಯಕ್ಕೆ ವಿರಾಟ ಪರ್ವ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ಅಭಿನಯ ನಾಯಕಿ. ಅನಂತ್ ಶೈನ್ ಚಿತ್ರದ ನಿರ್ದೇಶಕ. ಸುನಿಲ್ ರಾಜ್ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.