
2005ರಲ್ಲಿ ಬೆಳಗಾವಿ ಜಿಲ್ಲೆಯ ಬೊಂಬಾರಗ ಎನ್ನುವ ಹಳ್ಳಿಯಲ್ಲಿ ನಡೆದ ಈ ಪ್ರೇಮ ಕತೆಯನ್ನು ಈಗ ತೆರೆ ಮೇಲೆ ತರುತ್ತಿದ್ದಾರೆ ಮುತ್ತುರಾಜ್ ರೆಡ್ಡಿ. ಚಿತ್ರದ ಹೆಸರು ‘ಮಾಂಜ್ರಾ’.
ಈ ನೈಜ ಕತೆಗೆ ಸಂಬಂಧಿಸಿದ ಶಂಕರ್ ಅವರನ್ನು ಚಿತ್ರದ ಪತ್ರಿಕಾಗೋಷ್ಟಿಗೆ ಕರೆತಂದು ಚಿತ್ರತಂಡ ಪರಿಚಯಿಸಿತು. ವೇದಿಕೆ ಮೇಲೆ ಕೂರಿಸಿದರೂ ಫೋಸ್ಟರ್ನಲ್ಲಿ ನೋಡುತ್ತಲೇ ಇದ್ದ ಶಂಕರ್ಗೆ ಏನು ನೆನಪಾಯಿತೋ ಗೊತ್ತಿಲ್ಲ, ವೇದಿಕೆ ಮೇಲಿಂದ ದಿಢೀರ್ ಎಂದು ಇಳಿದು ಹೋದರು.
ಈ ವಾರವೂ 11 ಸಿನಿಮಾ ರಿಲೀಸ್;ಬಿಡುಗಡೆಯ ಅತಿವೃಷ್ಟಿಯಲ್ಲಿ ಒಳ್ಳೆಯ ಸಿನಿಮಾಗಳು ಕಾಣೆ!
ಹುಡುಗಿ ಕೆಳ ಜಾತಿಗೆ ಸೇರಿದಾಕೆ. ಹುಡುಗ ಮೇಲ್ಜಾತಿಯವನು. ಇವರ ಪ್ರೀತಿಗೆ ಜಾತಿ ಅಡ್ಡ ಬಂದು ಹುಡುಗನ ಕಡೆಯವರೇ ಹುಡುಗಿಯನ್ನು ಏನೋ ಮಾಡಿದ್ದಾರೆ ಎಂಬುದು ಸದ್ಯಕ್ಕೆ ಆ ಊರಿನಲ್ಲಿ ಇರುವ ಅನುಮಾನ. ಮೇಲ್ಜಾತಿ ಹುಡುಗನನ್ನು ಪ್ರೀತಿಸಿದ ಹುಡುಗಿ ಕೊಲೆಯೋ, ಆತ್ಮಹತ್ಯೆಯೋ ತಿಳಿಯದು. ಆಕೆ ತೀರಿಕೊಂಡಿದ್ದಾಳೆ.
ನಿಖಿಲ್ ರೇವತಿಗೆ ಹಾಕಿರುವ ಉಂಗುರದ ಬೆಲೆ ಇಷ್ಟೊಂದಾ?
ಈಗಲೂ ಅದೇ ಹಳ್ಳಿಯಲ್ಲಿ ಮೂಲ ಕತೆಯ ನಾಯಕಿಯ ಹೆತ್ತವರು ವಾಸಿಸುತ್ತಿದ್ದಾರೆ. ಅದೇ ಮನೆಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಜತೆಗೆ ಚಿತ್ರದಲ್ಲಿ ಶಂಕರ್ ಅವರನ್ನೂ ತೋರಿಸಿದ್ದಾರೆ. ಹೀಗೆ ಜಾತಿ ವಿಚಾರಕ್ಕೆ ನಿಗೂಢವಾಗಿ ಸಾವು ಕಂಡ ಹುಡುಗಿ, ಮಾನಸಿಕ ಅಸ್ವಸ್ಥನಾದ ಶಂಕರ್ ಕತೆ ಬಹುತೇಕರಿಗೆ ಗೊತ್ತಿಲ್ಲ. ಈ ಅನ್ ಟೋಲ್ಡ್ ಪ್ರೇಮ ಕತೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಈ ರಿಯಲ್ ಕತೆಗೆ ರಂಜಿತ್ ಸಿಂಗ್ ಹಾಗೂ ಅಪೂರ್ವ ಜೋಡಿಯಾಗಿದ್ದಾರೆ. ಚಿತ್ರೀಕರಣ ಮುಗಿದ್ದು, ಆಡಿಯೋ ಬಿಡುಗಡೆ ಮಾಡಿಕೊಂಡಿರುವ ಈ ನೈಜ ಕತೆಯ ‘ಮಾಂಜ್ರಾ’ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.