
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಇತ್ತೀಚಿಗೆ ನಿರೂಪಕಿ ಅನುಶ್ರೀ ಅವರ ಯುಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಮೊದಲ ಬಾರಿ ಪತ್ನಿ ರೇವತಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಪತ್ನಿ ಕೈ ರುಚಿ ಬಗ್ಗೆಯೂ ಹೇಳಿದ್ದಾರೆ.
ಹೊಸ ಮನೆ ಕಟ್ಟಲು ಮುಂದಾದ ನಿಖಿಲ್ ಕುಮಾರಸ್ವಾಮಿ- ರೇವತಿ!
ಲಾಕ್ಡೌನ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ತಮ್ಮ ರಾಜಕೀಯ ಜರ್ನಿ, ಮ್ಯಾರಿಡ್ ಲೈಫ್ ಹಾಗೂ ಟ್ರೋಲ್ಗಳ ಬಗ್ಗೆ ಅನುಶ್ರೀ ಜೊತೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿ ಬಗ್ಗೆ ನಿಖಿಲ್ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ರೇವತಿ ತುಂಬಾ innocent:
ಹೌದು! ರೇವತಿ ಜೊತೆ ಪೋಟೋ ಶೇರ್ ಮಾಡಿದರೆ ಮಾತ್ರ ವೈರಲ್ ಅಲ್ಲ ಅವರ ಗುಣದ ಬಗ್ಗೆ ಹೇಳಿರುವ ಮಾತುಗಳು ತುಂಬಾನೇ ವೈರಲ್ ಆಗಿದೆ. 'ಕೊರೋನಾದಿಂದ ಅನೇಕ ಜನರ ದಿನ ನಿತ್ಯದ ಜೀವನಕ್ಕೆ ತುಂಬಾನೇ ತೊಂದರೆ ಆಗಿದೆ ಅದಕ್ಕೆ ಬೇಸರವಾಗುತ್ತದೆ. ನಮಗೆ ಯಾವುದೇ ಕೆಲಸವಿಲ್ಲದ ಕಾರಣ ಇಬ್ಬರಿಗೂ ಒಳ್ಳೆ ಸಮಯ ಸಿಕ್ಕಿದೆ. ನನ್ನ ಹೆಂಡತಿ ನನಗೆ ಹೊಸಬರು ಅನಿಸುತ್ತಿಲ್ಲ. ತುಂಬಾ ವರ್ಷಗಳಿಂದ ನಮ್ಮಿಬ್ಬರಿಗೂ ಪರಿಚಯವಿದೆ ಅನಿಸುತ್ತಿದೆ. ನಾವು ಹೊಸ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದೀವಿ.ರೇವತಿ ನನಗಿಂತ 100 ಪಟ್ಟು ಮನುಷ್ಯತ್ವ ಇರುವ ವ್ಯಕ್ತಿ. ಮನಸ್ಸು ಮಗುವಿನ ಥರ.ಅವರು ತುಂಬಾ ವಂಡರ್ಫುಲ್ ವ್ಯಕ್ತಿ ನಾನು ತುಂಬಾನೇ ಲಕ್ಕಿ' ಎಂದು ಹೇಳಿದ್ದಾರೆ.
"
ಪತ್ನಿ ಕೈ ರುಚಿ:
ರೇವತಿ ಅಡುಗೆ ಚೆನ್ನಾಗಿ ಮಾಡುತ್ತಾರಾ? ಎಂದು ಅನುಶ್ರೀ ಕೇಳಿದ ಪ್ರಶ್ನೆಗೆ ನಿಖಿಲ್ ನಗುನಗುತ್ತಾ ಉತ್ತರಿಸಿದ್ದು 'ಅವರು ಇದೂವರೆಗೂ ಇನ್ನು ಅಡುಗೆ ಮಾಡಿಲ್ಲ.ನೀವು ಅವರನ್ನೇ ಕೇಳಬೇಕು. ಆದರೆ ಯಾವಾಗಲೋ ಒಂದು ಸಲ ಬಿರಿಯಾನಿ ಮಾಡಿದ್ದರಂತೆ ಆದರೆ ನನಗೆ ಗೊತ್ತಿಲ್ಲ' ಎಂದಿದ್ದರು.
ಸಂದರ್ಶನ ರಿಲೀಸ್ ಆದ ಎರಡನೇ ದಿನದಲ್ಲಿ ಪತ್ನಿ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳ ಸ್ಕ್ರೀನ್ಶಾಟ್ ಹಿಡಿದು ಶೇರ್ ಮಾಡಿಕೊಂಡು ಅಡುಗೆ ಏನಿರ ಬಹುದು ಎಂದು ಗೆಸ್ ಮಾಡಿದ್ದಾರೆ. ಕೆಲವರು ಅದನ್ನು ಪನೀರ್ ಚಿಲ್ಲಿ ಎಂದರೆ ಕೆಲವರೂ ಪಕ್ಕಾ ಗೌಡ್ರು ಆಗಿರೋ ಕಾರಣ ಅದು ಚಿಕನ್ ಆಗಿರುತ್ತದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪತ್ನಿ ಕೈರುಚಿ ನೋಡಲು ಕಾಯುತ್ತಿದ್ದ ನಿಖಿಲ್ಗೆ ಈ ಮೂಲಕ ಸವಿಯಲು ಯಮ್ಮಿ ಯಮ್ಮಿ ಚಿಕನ್ ಸಿಕ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.