ಆಸ್ಪತ್ರೆಯಲ್ಲಿರುವ ನಟ ವೆಂಕಟೇಶ್‌ ನೆರವಿಗೆ ನಿಂತ ಜಗ್ಗೇಶ್‌; ಒಂದೇ ಮಾತಿಗೆ ಒಂದು ಲಕ್ಷ ನೀಡಿದ ದರ್ಶನ್‌!

By Suvarna NewsFirst Published Feb 20, 2020, 8:46 AM IST
Highlights

ತಮ್ಮ ಜತೆ ಕೆಲಸ ಮಾಡಿದವರು ಗಂಭೀರವಾದ ಸಮಸ್ಯೆಗೆ ಸಿಲುಕಿದಾಗ ಅವರ ನೆರವಿಗೆ ನಿಲ್ಲುವುದು ದೊಡ್ಡತನ.

ಈಗ ಆ ದೊಡ್ಡತನ ಮೆರೆದಿರುವುದು ಜಗ್ಗೇಶ್‌. ತಮ್ಮ ಬಹುಕಾಲದ ಗೆಳೆಯ ವೆಂಕಟೇಶ್‌ ಯಕೃತ್ತಿನ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವುದನ್ನು ತಿಳಿದ ಜಗ್ಗೇಶ್‌ ಅವರನ್ನು ಭೇಟಿ ಮಾಡಿ ಈಗ ಗೆಳೆಯನನ್ನು ಅನಾರೋಗ್ಯದಿಂದ ಪಾರು ಮಾಡಲು ನೆರವಾಗುತ್ತಿದ್ದಾರೆ. ವೆಂಕಟೇಶ್‌ ಸಮಸ್ಯೆಯಲ್ಲಿರುವುದನ್ನು ಅವರು ದರ್ಶನ್‌ಗೆ ತಿಳಿಸಿದ್ದಾರೆ. ತಕ್ಷಣ ದರ್ಶನ್‌ ಒಂದು ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ.

ತೀವ್ರ ಅನಾರೋಗ್ಯ, ಚಿಕಿತ್ಸೆಗೂ ಹಣವಿಲ್ಲ; ಹಿರಿಯ ನಟನ ಬೆನ್ನಿಗೆ ನಿಂತ ಜಗ್ಗೇಶ್

 

250 ಕನ್ನಡ ಚಿತ್ರ ನಟಿಸಿದ ಮಿತ್ರ
ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ!ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಲ್ಲಿ ಮಾತಾಡಿದ್ದು!
ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ!
ತುಂಬಾ ದುಃಖವಾಯಿತು ಹಿರಿಯಕಲಾವಿದರ ಸ್ಥಿತಿಕಂಡು!
ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿಓಂ pic.twitter.com/i7qg9ZQ6Vk

— ನವರಸನಾಯಕ ಜಗ್ಗೇಶ್ (@Jaggesh2)

ಜಗ್ಗೇಶ್‌ ಈ ಕುರಿತು ಟ್ವೀಟ್‌ ಮಾಡಿದ್ದು, 250 ಚಿತ್ರಗಳಲ್ಲಿ ನಟಿಸಿದ ನನ್ನ ಮಿತ್ರನನ್ನು ಕೈಲಾದಷ್ಟುಸಹಾಯ ಮಾಡಿ ಉಳಿಸಲು ಯತ್ನಿಸುತ್ತಿರುವೆ ಎಂದಿದ್ದಾರೆ. ವೆಂಕಟೇಶ್‌ ಕುಟುಂಬಕ್ಕೆ ನೆರವಾಗಲು ಅವರು ಮಾಡಿದ ಟ್ವೀಟ್‌ ಮನವಿಗೆ ಅನೇಕರು ಸ್ಪಂದಿಸಿದ್ದಾರೆ.

 

ಕಿಲ್ಲರ್ ವೆಂಕಟೇಶ ವಿಷಯವಾಗಿ ನಾನು ಕರೆಮಾಡಿದ 1ಘಂಟೆಯಲ್ಲಿ ಅವನ ಚಿಕಿತ್ಸೆ ಗೆ 1ಲಕ್ಷ ರೂ ಕಳಿಸಿದ ಕಲಾಬಂಧು..!
ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು..ನಿನ್ನ ಶ್ರೇಷ್ಟಗುಣ ನನ್ನಹೃದಯದಲ್ಲಿ ಅಚ್ಚಾಯಿತು..
ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ.. god bless.. pic.twitter.com/hWg4jePvt9

— ನವರಸನಾಯಕ ಜಗ್ಗೇಶ್ (@Jaggesh2)

 

click me!