ಒಂದೇ ಕೈಯಲ್ಲಿ ಬ್ಯಾಟ್‌ ಹಿಡಿದು ಚೆಂಡನ್ನು ಆಕಾಶಕ್ಕೆ ಹಾರಿಸಿದ ಅಭಿಷೇಕ್ ಅಂಬರೀಶ್!

Suvarna News   | Asianet News
Published : Dec 30, 2019, 11:25 AM IST
ಒಂದೇ ಕೈಯಲ್ಲಿ ಬ್ಯಾಟ್‌ ಹಿಡಿದು ಚೆಂಡನ್ನು ಆಕಾಶಕ್ಕೆ ಹಾರಿಸಿದ ಅಭಿಷೇಕ್ ಅಂಬರೀಶ್!

ಸಾರಾಂಶ

2019 ಕ್ಕೆ  ಗುಡ್ ಬೈ ಹೇಳುವ ಸಮಯ ಬಂದಿದೆ. ಇಯರ್ ಎಂಡನ್ನು ಮೆಮೊರಬಲ್ ಆಗಿ ಇಡಬೇಕೆಂದು ಸ್ವಾಭಿಮಾನಿ ಮಂಡ್ಯ ಜನತೆ ಜೊತೆ ಕ್ರಿಕೆಟ್ ಅಡಿ ಸಂಭ್ರಮಿಸಿದ್ದಾರೆ ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಶ್.    

'ಅಮರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜೂನಿಯರ್ ರೆಬೆಲ್ ಸ್ಟಾರ್  ಅಭಿಷೇಶ್ ಅಂಬರೀಶ್ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

'ಕ್ರಿಕೆಟ್ ಇನ್ ಮಂಡ್ಯ'  ಅಂತ ಅಭಿ ಫೋಟೋ ಹಾಗೂ ಲಿಂಕ್ ಅನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶೇರ್ ಮಾಡಿಕೊಂಡಿದ್ದಾರೆ. 

"

ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!

ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು ಅಭಿಷೇಕ್ ಅಂಬರೀಶ್. ರೆಬೆಲ್ ಚಾಲೆಂಜ್ ಕಪ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ ಕ್ರಿಕೆಟ್ ಪಂದ್ಯಾವಳಿ ಮಂಡ್ಯದ ಸರ್ಕಾರಿ ಕಾಲೇಜಿನ ಆವರಣದಲ್ಲಿ ನಡೆಯಿತು. 

ರೆಬೆಲ್ ಸೋಮು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಆಗಿದೆ.  ಒಂದೇ ಕೈಯಲ್ಲಿ ಅಭಿಷೇಕ್ ಬ್ಯಾಟ್ ಹಿಡಿದು ಬಂದ ಬಾಲನ್ನು ಆಕಾಶಕ್ಕೆ ಹಾರಿಸಿದ್ದಾರೆ.  ಈ ವೇಳೆ ವೀಕ್ಷಿಸಲು ಬಂದ ಜನರು ತಮ್ಮ ನೆಚ್ಚಿನ ಮಂಡ್ಯದ ಮಗನೊಂದಿಗೆ ಫೋಟೋ ಹಾಗೂ ವಿಡಿಯೋ ತೆಗೆಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?