ಲೋಕಸಭೆ ಚುನಾವಣೆ 2024: ಅಡುಗೆ ಮಾಡುವ ಹೆಣ್ಣಿಗೆ ಈ ಸಲ ವೋಟ್‌ ಹಾಕಿ, ಸಂಸದ ಸಿದ್ದೇಶ್ವರ್‌ ಕರೆ

Published : Apr 02, 2024, 01:03 PM IST
ಲೋಕಸಭೆ ಚುನಾವಣೆ 2024: ಅಡುಗೆ ಮಾಡುವ ಹೆಣ್ಣಿಗೆ ಈ ಸಲ ವೋಟ್‌ ಹಾಕಿ, ಸಂಸದ ಸಿದ್ದೇಶ್ವರ್‌ ಕರೆ

ಸಾರಾಂಶ

ಸಂಸದ ಸಿದ್ದೇಶ್ವರ್ ಅವರಂತು ಅಡುಗೆ ಮಾಡುವ ಹೆಣ್ಣಿಗೆ ಮತ ಕೊಡಿ ಎಂಬುದಾಗಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳು ಅಡುಗೆ ಮಾಡುತ್ತಾರೆ. ಶೇ.95ರಷ್ಟು ಮಹಿಳೆಯರು ಅಡುಗೆ ಮಾಡಿಕೊಂಡೇ, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಅಡುಗೆ ಮಾಡುವ ಮಹಿಳೆಯ ಸಾಧನೆ ಹೆಜ್ಜೆ ಗುರುತಿದೆಯೆಂದು ಸಂಬಂಧದಲ್ಲಿ ತಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಸಿದ್ದೇಶ್ವರ್ 

ದಾವಣಗೆರೆ(ಏ.02): ಗಾಯತ್ರಿ ಸಿದ್ದೇಶ್ವರ್‌ ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂಬ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನೇ ಲೋಕಸಭೆ ಚುನಾವಣೆಗೆ ಬ್ರಹ್ಮಾಸ್ತ್ರ ಮಾಡಿಕೊಂಡು ಸಂಸದ ಜಿ.ಎಂ.ಸಿದ್ದೇಶ್ವರ್‌ ಸೇರಿ ಇಡೀ ಬಿಜೆಪಿ ಪ್ರಚಾರಕ್ಕೆ ಚುರುಕು ಕೊಟ್ಟಿದೆ.

ಸಂಸದ ಸಿದ್ದೇಶ್ವರ್ ಅವರಂತು ಅಡುಗೆ ಮಾಡುವ ಹೆಣ್ಣಿಗೆ ಮತ ಕೊಡಿ ಎಂಬುದಾಗಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳು ಅಡುಗೆ ಮಾಡುತ್ತಾರೆ. ಶೇ.95ರಷ್ಟು ಮಹಿಳೆಯರು ಅಡುಗೆ ಮಾಡಿಕೊಂಡೇ, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಅಡುಗೆ ಮಾಡುವ ಮಹಿಳೆಯ ಸಾಧನೆ ಹೆಜ್ಜೆ ಗುರುತಿದೆಯೆಂದು ಸಂಬಂಧದಲ್ಲಿ ತಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ

ಯಾವಾಗ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಅಂತರ್‌ ರಾಷ್ಟ್ರೀಯ ಕ್ರೀಡಾಪಟು ಸೈನಾ ನೆಹ್ವಾಲ್‌ ಸಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹ ಶಾಮನೂರು ಅವರ ಹೇಳಿಕೆಗೆ ಆಕ್ಷೇಪಿಸಿರುವುದು ಬಿಜೆಪಿ ಪಾಳೆಯದ ರಣೋತ್ಸಾಹ ಹೆಚ್ಚಿಸಿದೆ. ಹೆಣ್ಣು ವಿಮಾನದ ಪೈಲಟ್‌, ರಾಕೆಟ್ ಉಡಾವಣೆ ಮಾಡುತ್ತಾಳೆ. ಅಷ್ಟೇ ಅಲ್ಲ, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸಹ ಮಹಿಳೆಯೆನ್ನುವ ಮೂಲಕ ಸಂಸದ ಸಿದ್ದೇಶ್ವರ ತಿರುಗೇಟು ನೀಡುತ್ತಿದ್ದಾರೆ.

ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನೆಂದು ಜನರಿಗೆ ಮೊದಲು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ