ಪರಿಷತ್‌ ಕದನ: ಆರ್‌. ಶಂಕರ್‌ ಸಂಪತ್ತು 301 ಕೋಟಿ ರೂ.

Kannadaprabha News   | Asianet News
Published : Jun 19, 2020, 01:44 PM IST
ಪರಿಷತ್‌ ಕದನ: ಆರ್‌. ಶಂಕರ್‌ ಸಂಪತ್ತು 301 ಕೋಟಿ ರೂ.

ಸಾರಾಂಶ

ಶಂಕರ್‌ ಹೆಸರಲ್ಲಿ 195 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಪತ್ನಿ ಧನಲಕ್ಷ್ಮಿ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿ| ಶಂಕರ್‌ ಬಳಿ 35.10 ಲಕ್ಷ ರು. ನಗದು, ಪತ್ನಿ ಧನಲಕ್ಷ್ಮಿ ಬಳಿ 27.77 ಲಕ್ಷ ರು. ನಗದು ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಮಾಹಿತಿ|

ಬೆಂಗಳೂರು(ಜೂ.19): ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆರ್‌.ಶಂಕರ್‌ ಒಟ್ಟು ಆಸ್ತಿಯ ಮೌಲ್ಯ 301.38 ಕೋಟಿ ರು.ಗಳಿಗಿಂತ ಹೆಚ್ಚಿದೆ. 2018ರಲ್ಲಿ ಇವರು ಸುಮಾರು 265 ಕೋಟಿ ಆಸ್ತಿ ಹೊಂದಿದ್ದರು.

ಶಂಕರ್‌ ಹೆಸರಲ್ಲಿ 195 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಪತ್ನಿ ಧನಲಕ್ಷ್ಮಿ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿಯನ್ನು ಹೊಂದಲಾಗಿದೆ. ಶಂಕರ್‌ ಬಳಿ 35.10 ಲಕ್ಷ ರು. ನಗದು ಹೊಂದಿದ್ದು, ಪತ್ನಿ ಧನಲಕ್ಷ್ಮಿ ಬಳಿ 27.77 ಲಕ್ಷ ರು. ನಗದು ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಮಾಹಿತಿ ನೀಡಿದ್ದಾರೆ.

ಶಂಕರ್‌ ಹೆಸರಲ್ಲಿ 28.90 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 166.30 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ ಪತ್ನಿಯ ಹೆಸರಲ್ಲಿ 13.90 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 92.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಶಂಕರ್‌ ಹೆಸರಲ್ಲಿ 44.63 ಕೋಟಿ ರು. ಸಾಲ ಮತ್ತು ಪತ್ನಿ ಹೆಸರಲ್ಲಿ 21.93 ಕೋಟಿ ರು. ಸಾಲ ಇದೆ.

ಪರಿಷತ್‌ ಎಲೆಕ್ಷನ್‌: ಬಿ.ಕೆ. ಹರಿಪ್ರಸಾದ್‌ ಬಳಿ ಇದೆ 14.62 ಕೋಟಿ ರು. ಮೌಲ್ಯದ ಆಸ್ತಿ

ಶಂಕರ್‌ ಹೆಸರಲ್ಲಿ 1.27 ಕೋಟಿ ರು. ಮೌಲ್ಯದ ಮೂರು ಇನೋವಾ ಕಾರ್‌, ಸ್ಕಾರ್ಪಿಯೋ ಮತ್ತು ಬಿಎಂಡಬ್ಲೂ ಕಾರ್‌ ಇದೆ. ಪತ್ನಿ ಹೆಸರಲ್ಲಿ 81.91 ಲಕ್ಷ ರು. ಮೌಲ್ಯದ ಇನ್ನೋವಾ, ಮಹೀಂದ್ರಾ ಕಾರ್‌, ಫೋರ್ಡ್‌ ಮತ್ತು ಬಿಎಂಡಬ್ಯೂ ಕಾರ್‌ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖ ಮಾಡಲಾಗಿದೆ.

ವಿವಿಧ ಬ್ಯಾಂಕ್‌ನ ಖಾತೆಯಲ್ಲಿ 3.57 ಲಕ್ಷ ರು. ಮತ್ತು ಪತ್ನಿಯ ಹೆಸರಲ್ಲಿನ ವಿವಿಧ ಬ್ಯಾಂಕ್‌ನಲ್ಲಿ 94, 619 ರು. ಇದೆ. 73.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 11,775 ಸಾವಿರ ರು. ಮೌಲ್ಯದ ಬೆಳ್ಳಿ ಇದೆ. ಪತ್ನಿಯ ಬಳಿ 61.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 4.32 ಲಕ್ಷ ರು. ಮೌಲ್ಯದ 8 ಕೆಜಿ ಬೆಳ್ಳಿ ಮತ್ತು 10 ಲಕ್ಷ ರು. ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಇದೆ ಎಂದು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ