ವೀರಪ್ಪನ್‌ ಪುತ್ರಿಗೆ ಬಿಜೆಪಿಯಿಂದ ಹೊಸ ಹುದ್ದೆ!

By Suvarna NewsFirst Published Jul 16, 2020, 10:51 AM IST
Highlights

ಕಾಡುಗಳ್ಳ ವೀರಪ್ಪನ್‌ನ ಪುತ್ರಿ ವಿದ್ಯಾರಾಣಿ| ವೀರಪ್ಪನ್‌ ಪುತ್ರಿಗೆ ತಮಿಳ್ನಾಡು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷೆ ಹುದ್ದೆ| ಕಳೆದ ವರ್ಷವಷ್ಟೇ ವಿದ್ಯಾರಾಣಿ ಬಿಜೆಪಿ ಸೇರ್ಪಡೆಯಾಗಿದ್ದರು

ಚೆನ್ನೈ(ಜು.16): ಕಾಡುಗಳ್ಳ ವೀರಪ್ಪನ್‌ನ ಪುತ್ರಿ ವಿದ್ಯಾರಾಣಿಯನ್ನು ತಮಿಳುನಾಡು ರಾಜ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಕಳೆದ ವರ್ಷವಷ್ಟೇ ವಿದ್ಯಾರಾಣಿ ಬಿಜೆಪಿ ಸೇರ್ಪಡೆಯಾಗಿದ್ದರು.

ಇನ್ನು ತಮಿಳುನಾಡು ಮಾಜಿ ಸಿಎಂ ಎಂಜಿಆರ್‌ ಅವರ ದತ್ತುಪುತ್ರಿ ಗೀತಾ, ನಟ ರಜನೀಕಾಂತ್‌ರ ಅಳಿಯ ಧನುಷ್‌ ಅವರ ತಂದೆ ಕಸ್ತೂರಿ ರಾಜಾ ಅವರಿಗೂ ರಾಜ್ಯ ಕಾರ್ಯಕಾರಿಣಿಯಲ್ಲಿ ವಿವಿಧ ಹುದ್ದೆಗಳನ್ನು ನೀಡಲಾಗಿದೆ.

ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆ!

ಇದೇ ವರ್ಷದ ಮಾರ್ಚ್‌ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಎಲ್‌. ಮುರುಗನ್‌ ಅವರು ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಗುರಿ ಹೊಂದಿದ್ದಾರೆ. ಇದರ ಭಾಗವಾಗಿ ಪಕ್ಷದ ಬಲವರ್ಧನೆಗಾಗಿ ಈ ನೇಮಕ ನಡೆದಿದೆ ಎಂದು ತಿಳಿದುಬಂದಿದೆ.

click me!