ಮನಸ್ಸು ಮಾಡಿದ್ರೆ ಮಾಡಾಳು ವಿರುದ್ಧ ಕೇಸ್‌ ತಪ್ಪಿ​ಸ​ಬ​ಹು​ದಿ​ತ್ತು: ಪ್ರಲ್ಹಾದ್ ಜೋಶಿ

By Kannadaprabha NewsFirst Published Mar 6, 2023, 10:33 AM IST
Highlights

 ನಮ್ಮ ಸರ್ಕಾರ ಮನಸ್ಸು ಮಾಡಿ​ದ್ದರೆ ಲೋಕಾ​ಯುಕ್ತ ದಾಳಿ​ಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣ ದಾಖ​ಲಾ​ಗು​ವು​ದನ್ನು ತಡೆಯಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ನಾವು ಯಾವ​ತ್ತಿ​ದ್ದರೂ ಭ್ರಷ್ಟಾಚಾರದ ವಿರುದ್ಧ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದರು.

ಬಾಳೆಹೊನ್ನೂರು/ಹುಬ್ಬ​ಳ್ಳಿ (ಮಾ.6) : ನಮ್ಮ ಸರ್ಕಾರ ಮನಸ್ಸು ಮಾಡಿ​ದ್ದರೆ ಲೋಕಾ​ಯುಕ್ತ ದಾಳಿ​ಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣ ದಾಖ​ಲಾ​ಗು​ವು​ದನ್ನು ತಡೆಯಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ನಾವು ಯಾವ​ತ್ತಿ​ದ್ದರೂ ಭ್ರಷ್ಟಾಚಾರದ ವಿರುದ್ಧ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಆರೋಪಿಸಿದರು.

ಚಿಕ್ಕ​ಮ​ಗ​ಳೂ​ರಿನ(Chikkamagaluru) ಬಾಳೆ​ಹೊ​ನ್ನೂರು ರಂಭಾಪುರಿ ಪೀಠ(Balehonnur rambhapuri peetha)ದ ಆವರಣ ಹಾಗೂ ಹುಬ್ಬ​ಳ್ಳಿ​ಯಲ್ಲಿ ಭಾನು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಆಡ​ಳಿ​ತಾ​ರೂಢ ಪಕ್ಷದ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ(Karnataka lokayukta raid)ಯಾಗಿದೆ ಎಂದರೆ ಅದು ನಮ್ಮ ಸರ್ಕಾರದ ಪಾರದರ್ಶಕತೆ ತೋರಿಸುತ್ತದೆ. ತಪ್ಪು ಮಾಡಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದ​ರು.

Latest Videos

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಜಾರಿಗೆ ತರಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬೀಜಾಸುರನನ್ನು ಉತ್ಪಾದನೆ ಮಾಡಿದ್ದೇ ಕಾಂಗ್ರೆಸ್‌ ಪಕ್ಷ. ಈ ಹಿಂದೆ ಕಾಂಗ್ರೆಸ್‌ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿತ್ತು. ಇದೀಗ ನಮ್ಮ ಕಾಲದಲ್ಲಿ ಲೋಕಾಯುಕ್ತವನ್ನು ಬಲಗೊಳಿಸಲಾಗಿದೆ. ಲೋಕಾ​ಯು​ಕ್ತಕ್ಕೆ ಪೂರ್ಣ ಅಧಿ​ಕಾ​ರ ಕೊಟ್ಟಿದ್ದೇ ನಮ್ಮ ಸರ್ಕಾ​ರ. ಯಾರು ಕಳಂಕಿತರಿರುತ್ತಾರೆ ಅವರ ವಿರುದ್ಧ ಕ್ರಮ ಆಗಲಿದೆ. ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಸುಮ​ಲ​ತಾಗೆ ಬಿಜೆಪಿ ಪರ ಒಲ​ವಿ​ದೆ: ಸಚಿ​ವ

ಮಂಡ್ಯ ಸಂಸದೆ ಸುಮಲತಾ(MP Sumalata) ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಲೋಕಸಭೆಯಲ್ಲಿ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಮ್ಮ ಪರ ಮತ ಚಲಾವಣೆ ಮಾಡಿದ್ದರು. ಅವರಿಗೆ ಬಿಜೆಪಿ ಪರ ಒಲವಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸ್ಪಷ್ಟ​ವಾ​ಗ​ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿ​ದ​ರು.

ಭ್ರಷ್ಟಾಚಾರ ಹುಟ್ಟು ಹಾಕಿದ ರಕ್ತ ಬೀಜಾಸುರ ಪಕ್ಷ ಕಾಂಗ್ರೆಸ್: ಪ್ರಹ್ಲಾದ್ ಜೋಶಿ ವಾಗ್ದಾಳಿ

click me!