ದೇಶದಲ್ಲಿ ಅತೀ ಹೆಚ್ಚು ಸುಳ್ಳು ಹೇಳೋರು ಮೋದಿ & ಬಿಎಸ್‌ವೈ: ಸಿದ್ದು

Suvarna News   | Asianet News
Published : Mar 29, 2021, 06:40 PM ISTUpdated : Mar 29, 2021, 06:56 PM IST
ದೇಶದಲ್ಲಿ ಅತೀ ಹೆಚ್ಚು ಸುಳ್ಳು ಹೇಳೋರು ಮೋದಿ & ಬಿಎಸ್‌ವೈ: ಸಿದ್ದು

ಸಾರಾಂಶ

ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದು ವಾಗ್ದಾಳಿ | ದೇಶದಲ್ಲಿಯೇ ಅತೀ ಹೆಚ್ಚು ಸುಳ್ಳು ಹೇಳುವರು ಇದ್ರೆ ಅವರೇ ಮೋದಿ ಮತ್ತು ಬಿಎಸ್ ವೈ ಎಂದ ಸಿದ್ದರಾಮಯ್ಯ  

ರಾಯಚೂರು(ಮಾ.29): ದೇಶದಲ್ಲಿಯೇ ಅತೀ ಹೆಚ್ಚು ಸುಳ್ಳು ಹೇಳುವರು ಇದ್ರೆ ಅವರೇ ಮೋದಿ ಮತ್ತು ಬಿಎಸ್ ವೈ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಶುಭಾಗ್ಯ, ಸಾದಿ ಭಾಗ್ಯ ನಿಲ್ಲಿಸಿದ್ದಾರೆ. ಪ್ರತಾಪ್ ಗೌಡ ಅಂತಹ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ದೇಶದಲ್ಲಿ ಬಡವರು ಬದುಕದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ವಸ್ತುಗಳ ದರ ಗಗನಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಗ್ಯಾಸ್ ದರ 450 ರೂ. ಇದ್ದ ಸಿಲಿಂಡರ್ ದರ 950 ರೂ. ಆಗಿದೆ. ಪ್ರಧಾನಿಯವರೇ ಅಚ್ಛಾ ದಿನ್ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಅನ್ನಭಾಗ್ಯದಲ್ಲಿ 7 ಕೆಜಿ ಅಕ್ಕಿ ಕೊಡ್ತಿದ್ರೆ ಬಿಎಸ್‌ವೈ ಅಪ್ಪನ ಮನೆ ಗಂಟು ಹೋಗ್ತಿತ್ತಾ ಎಂದ ಸಿದ್ದರಾಮಯ್ಯ

ನಿರುದ್ಯೋಗಿಗಳು ಕೆಲಸ ಕೇಳಿದ್ರೆ ಪಕೋಡಾ ಮಾರಲು ಹೋಗಲು ಹೇಳುತ್ತಾರೆ. ದೇಶದಲ್ಲಿ ರೈತ ವಿರೋಧಿ ಕಾನೂನುಗಳು ಮೋದಿ ತಂದಿದ್ದಾರೆ. ಮೋದಿ ರೈತ ವಿರೋಧಿ ಪ್ರಧಾನ ಮಂತ್ರಿ ಆಗಿದ್ದಾರೆ. ದೇಶದ ಜನರು ಉಳಿಯಲು ಬಿಜೆಪಿ ತೊಲಗಲೇ ಬೇಕು ಎಂದಿದ್ದಾರೆ.

ಮಸ್ಕಿ ಉಪಚುನಾವಣೆ ಉಸ್ತುವಾರಿ ವಿಜಯೇಂದ್ರ ಅಂದ್ರೆ ದುಡ್ಡು. ದುಡ್ಡಿಗೆ ಓಟು ಮಾರಾಟ ಮಾಡುತ್ತೀರಾ? ನಮ್ಮ ಅಭ್ಯರ್ಥಿ ಬಳಿ ದುಡ್ಡು ಇಲ್ಲ. ಬಸನಗೌಡ ತುರ್ವಿಹಾಳ ಗೆದ್ದರೇ ಸ್ವಾಭಿಮಾನದ ವಿಜಯ ಎಂದಿದ್ದಾರೆ ಸಿದ್ದರಾಮಯ್ಯ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿ ದುಡ್ಡಿನ ಮದದಿಂದ ಚುನಾವಣೆ ಮಾಡಲು ಹೊರಟಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ