ಭಯಪಡುವವರು ಪಕ್ಷ ಬಿಡಿ : ರಾಹುಲ್‌ ಕುತೂಹಲಕಾರಿ ಹೇಳಿಕೆ

Kannadaprabha News   | Asianet News
Published : Jul 17, 2021, 11:13 AM ISTUpdated : Jul 17, 2021, 12:06 PM IST
ಭಯಪಡುವವರು ಪಕ್ಷ ಬಿಡಿ : ರಾಹುಲ್‌ ಕುತೂಹಲಕಾರಿ ಹೇಳಿಕೆ

ಸಾರಾಂಶ

: ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಒಳಸಂಘರ್ಷ ಹಾಗೂ ಕೆಲ ಮುಖಂಡರು ಪಕ್ಷ ಬಿಟ್ಟ ಬೆನ್ನಲ್ಲೇ ಕುತೂಹಲಕಾರಿ ಹೇಳಿಕೆ  ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕುತೂಹಲಕಾರಿ ಹೇಳಿಕೆ  ‘ವಾಸ್ತವ ಸಂಗತಿಯನ್ನು ಮತ್ತು ಬಿಜೆಪಿಯನ್ನು ಎದುರಿಸಲು ಭಯ ಪಡುವವರು ಪಕ್ಷವನ್ನು ತೊರೆಯಬಹುದು

ನವದೆಹಲಿ (ಜು.17) : ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಒಳಸಂಘರ್ಷ ಹಾಗೂ ಕೆಲ ಮುಖಂಡರು ಪಕ್ಷ ಬಿಟ್ಟ ಬೆನ್ನಲ್ಲೇ ಕುತೂಹಲಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ವಾಸ್ತವ ಸಂಗತಿಯನ್ನು ಮತ್ತು ಬಿಜೆಪಿಯನ್ನು ಎದುರಿಸಲು ಭಯ ಪಡುವವರು ಪಕ್ಷವನ್ನು ತೊರೆಯಬಹುದು. ಕಾಂಗ್ರೆಸ್‌ ಹೊರಗಿನ ಭಯ ರಹಿತ ಮುಖಂಡರನ್ನು ಪಕ್ಷಕ್ಕೆ ಕರೆತರಲಾಗುವುದು’ ಎಂದು ಹೇಳಿದ್ದಾರೆ.

ಮಾಜಿ ಸಿಎಂಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನ? ಸೋನಿಯಾ ಭೇಟಿ!

ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, ಹೆದರಿಕೆ ಇಲ್ಲದೇ ಇರುವ ಅನೇಕ ಮಂದಿ ಇದ್ದಾರೆ. ಆದರೆ, ಅವರು ಪಕ್ಷದ ಹೊರಗಿನವರಾಗಿದ್ದಾರೆ. ಯಾರು ನಮ್ಮವರೋ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ಪಕ್ಷದಲ್ಲಿ ಇರಲು ಭಯ ಪಡುವವರನ್ನು ಹೊರಗೆ ಕಳುಹಿಸಲಾಗುವುದು. ಅಂಥವರು ಆರ್‌ಎಸ್‌ಎಸ್‌ ಜನರು. ಅವರು ನಮಗೆ ಬೇಕಾಗಿಲ್ಲ. ಇದು ನಮ್ಮ ಸಿದ್ಧಾಂತ. ಇದು ನಾನು ನಿಮಗೆ ನೀಡುತ್ತಿರುವ ಮೂಲ ಸಂದೇಶ ಎಂದು ಹೇಳಿದ್ದಾರೆ.

ಸಿದ್ದು, ಡಿಕೆಶಿ ಇಬ್ಬರಿಗೂ ರಾಹುಲ್‌ ಬುಲಾವ್‌

ಸಿಧು ಬಗ್ಗೆ ಕ್ಯಾಪ್ಟನ್‌ ಗರಂ

ಚಂಡೀಗಢ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನವಜೋತ್‌ ಸಿಧು ನೇಮಿಸಲಾಗುತ್ತದೆ ಎಂಬ ವರದಿಗಳ ಬೆನ್ನಲ್ಲೇ, ಸಿಧು ಬಗ್ಗೆ ಅವರ ವೈರಿ, ಮುಖ್ಯಮಂತ್ರಿ ಅಮರೀಂದ್‌ ಸಿಂಗ್‌ ಆಕ್ಷೇಪಿಸಿದ್ದಾರೆ. ಸಿಧು ನೇಮಕಾತಿಯು ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ