'ಮೋದಿ ಕ್ಯಾಬಿನೆಟ್‌ನಲ್ಲಿ ಬಿಜೆಪಿಯೇತರ ಮಂತ್ರಿ ರಾಮದಾಸ್ ಅಠಾವಳೆ ಒಬ್ಬರೇ'

Published : Oct 10, 2020, 02:46 PM ISTUpdated : Oct 10, 2020, 02:47 PM IST
'ಮೋದಿ ಕ್ಯಾಬಿನೆಟ್‌ನಲ್ಲಿ ಬಿಜೆಪಿಯೇತರ ಮಂತ್ರಿ ರಾಮದಾಸ್ ಅಠಾವಳೆ ಒಬ್ಬರೇ'

ಸಾರಾಂಶ

 ಹೆಸರಿಗೆ ಎನ್ ಡಿ ಎ ಸರ್ಕಾರ ಆದರೂ ಕೂಡ ಮೋದಿ ಅವರದು ಪೂರ್ತಿ ಬಿಜೆಪಿ ಮಯ ಕ್ಯಾಬಿನೆಟ್ ರೀತಿ ಆಗಿದೆ.

ಪ್ರಶಾಂತ್ ನಾತು, ಇಂಡಿಯಾ ಗೇಟ್

ನವದೆಹಲಿ(ಅ.10): ಕೇಂದ್ರ ಕ್ಯಾಬಿನೆಟ್ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ರಿಪಬ್ಲಿಕನ್ ಪಾರ್ಟಿಯ ರಾಮದಾಸ್ ಅಠಾವಳೆ ಒಬ್ಬರೇ ಬಿಜೆಪಿಯೇತರ ಮಂತ್ರಿ. ಹೆಸರಿಗೆ ಎನ್ ಡಿ ಎ ಸರ್ಕಾರ ಆದರೂ ಕೂಡ ಮೋದಿ ಅವರದು ಪೂರ್ತಿ ಬಿಜೆಪಿ ಮಯ ಕ್ಯಾಬಿನೆಟ್ ರೀತಿ ಆಗಿದೆ.

ಕೇಂದ್ರ ಸಂಪುಟದಲ್ಲೀಗ ಏಕೈಕ ಎನ್‌ಡಿಎ ಮಂತ್ರಿ!

2014 ರಲ್ಲಿ ಮೋದಿ ಮೊದಲ ಬಾರಿಗೆ ಸಂಪುಟ ರಚನೆ ಮಾಡಿದಾಗ ಸಂಪುಟದಲ್ಲಿ ತೆಲಗು ದೇಶ0 ಶಿವಸೇನೆ ಅಕಾಲಿ ದಳ ಅಪ್ಣಾ ದಳ ಲೋಕಜನ ಶಕ್ತಿ ಪಕ್ಷ ಮತ್ತು ಉಪೇಂದ್ರ ಕುಶ್ವಾಹ್ ಅವರ ಪಕ್ಷಗಳ ಪ್ರಾತಿನಿಧ್ಯ ಇತ್ತು.ಆದರೆ 2018 ರ ಹೊತ್ತಿಗೆ ಆಂಧ್ರ ಚುನಾವಣೆ ಹೊತ್ತಿಗೆ ಚಂದ್ರ ಬಾಬು ನಾಯಿಡು ಎನ್ ಡಿ ಎ ದಿಂದ ಹೊರಬಿದ್ದಾಗ ಕ್ಯಾಬಿನೆಟ್ ಸಚಿವರಾಗಿದ್ದ ಅಶೋಕ ಗಜಪತಿ ರಾಜು ಕ್ಯಾಬಿನೆಟ್ ನಿಂದ ಹೊರಬಿದ್ದರು.2019 ರ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮೈತ್ರಿ ಮುರಿದು ಬಿದ್ದ ನಂತರ ಶಿವಸೇನೆಯ ಅರವಿಂದ್ ಸಾವಂತ್ ಕ್ಯಾಬಿನೆಟ್ ನಿಂದ ಹೊರಗೆ ಹೋದರು.ಅಪ್ಣಾ ದಳದ ಅನುಪ್ರಿಯಾ ಪಟೇಲ್ ರನ್ನು ಮೋದಿ ಅವರೇ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ ಜೊತೆಗೆ ಬಿಹಾರದಲ್ಲಿ ಬಿಜೆಪಿ ಜೊತೆಗೆ ನಿತೀಶ್ ಬಂದಿದ್ದರಿಂದ ಉಪೇಂದ್ರ ಕುಶ್ವಾಹ್ ಮಂತ್ರಿ ಮಂಡಲ ದಿಂದ ಹೊರಗಡೆ ಹೋಗಿ ಲಾಲು ಜೊತೆ ಸೇರಿಕೊಂಡರು.ಜೆ ಡಿ ಯು ದಿಂದ ಯಾರು ಕೂಡ ಮಂತ್ರಿ ಮಂಡಲದಲ್ಲಿ ಸೇರ್ಪಡೆ ಆಗಲು ನಿತೀಶ್ ಕುಮಾರ ಒಪ್ಪಿಲ್ಲ.

ಬಿಹಾರ ಚುನಾವಣಾ ಕಣದಲ್ಲಿ ಬಿಗ್ ಟ್ವಿಸ್ಟ್, ಬಂಡೆದ್ದ ಚಿರಾಗ್‌ಗೆ ಮುಖಭಂಗ!

ಇನ್ನು ಕಳೆದ ತಿಂಗಳು ಅಕಾಲಿ ದಳದ ಹರ್ ಸಿಮ್ರಾಟ್ ಕೌರ್ ಬಾದಲ್ ಕೃಷಿ ವಿಧೇಯಕ ವಿರೋಧಿಸಿ ಕ್ಯಾಬಿನೆಟ್ ನಿಂದ ಹೊರಗೆ ಹೋಗಿದ್ದು ಬಿಹಾರ ಚುನಾವಣೆಗೆ ಮೊದಲೇ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ.

ಇನ್ನು ಬಿಹಾರ ಚುನಾವಣೆ ಮುಗಿಯುವವರೆಗೆ ಮೋದಿ ಸಾಹೇಬರು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳು ಕಡಿಮೆ.ಮೂಲಗಳು ಹೇಳುತ್ತಿರುವ ಪ್ರಕಾರ ನವೆಂಬರ್ ನಲ್ಲಿ ಜಗನ್ ರೆಡ್ಡಿ ಅವರ ವೈ ಎಸ್ ಆರ್ ಪಕ್ಷದಿಂದ ಒಬ್ಬರು ಮತ್ತು ಬಿಹಾರದ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಚಿರಾಗ್ ಪಾಸ್ವಾನ್ ಮೋದಿ ಸಂಪುಟದಲ್ಲಿ ಶಾಮೀಲಾಗ ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!