ರೇವಣ್ಣ-ಬಿಎಸ್‌ವೈ ಭೇಟಿ ಹಿಂದಿನ ಅಸಲಿ ಕಥೆ ಏನು?

Published : Jan 29, 2019, 09:06 PM ISTUpdated : Jan 29, 2019, 09:13 PM IST
ರೇವಣ್ಣ-ಬಿಎಸ್‌ವೈ ಭೇಟಿ ಹಿಂದಿನ ಅಸಲಿ ಕಥೆ ಏನು?

ಸಾರಾಂಶ

ಮಹತ್ವದ ರಾಜಕಾರಣದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಅಸಲಿ ಕಹಾನಿ..

ಬೆಂಗಳೂರು[ಜ.29] ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ನಂತರ ದೋಸ್ತಿ ಸರ್ಕಾರದ ಪಾಲುದಾರಿಕೆ ಪಕ್ಷಗಳ ನಡುವೆ ಇದ್ದ ಭಿನ್ನಾಭಿಪ್ರಾಯ ಮತ್ತಷ್ಟು ಜಗಜ್ಜಾಹೀರು ಆಗಿದೆ. ಈ ಮಧ್ಯೆ ಸಚಿವ, ಸಿಎಂ ಕುಮಾರಸ್ವಾಮಿ ಅವರ ಸಹೋದರ ಎಚ್‌.ಡಿ ರೇವಣ್ಣ ಮತ್ತು  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ  ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಮಂಗಳವಾರ ಸಂಜೆ ಹರಿದಾಡಿದೆ.

ಆಪರೇಶನ್ ವಿಚಾರಗಳಲ್ಲಿ ಇದ್ದ ದೋಸ್ತಿಗಳಿಗೆ ಇದು ಸಹಜವಾಗಿಯೇ ಆತಂಕ ಹೆಚ್ಚು ಮಾಡಿದೆ. ಆದರೆ ನಿಜಕ್ಕೂ ಇಬ್ಬರು ನಾಯಕರು ಭೇಟಿಯೇ ಆಗಿಲ್ಲ. ನಾಯಕರ ಭೇಟಿ ನಡುವಿನ ವಿಚಾರವನ್ನು ಪರಿಶೀಲನೆ ಮಾಡಿದಾಗ ಅಂತಹ ಯಾವುದೆ ರಾಜಕಾರಣದ ಬೆಳವಣಿಗೆ ನಡೆದಿಲ್ಲ ಎಂಬುದು ಗೊತ್ತಾಗಿದೆ.

ತಮ್ಮ ರಾಜೀನಾಮೆ ಕೊಟ್ರೆ.. ‘ಸೂಪರ್‌ ಸಿಎಂ’ ಏನ್‌ ಮಾಡ್ತಾರಂತೆ!

ಒಟ್ಟಿನಲ್ಲಿ ಆಪರೇಶನ್ ಸಂಕ್ರಾಂತಿ ಎಂಬ ವಿಚಾರ ಬದಿಗೆ ಸರಿಯುತ್ತಿದ್ದ ಹೊತ್ತಿನಲ್ಲಿ ರೇವಣ್ಣ  ಮತ್ತು ಬಿಎಸ್‌ವೈ ನಡುವಿನ ಭೇಟಿ ವಿಚಾರ  ಸಹಜವಾಗಿಯೇ ಕುತೂಹಲ ಮೂಡಿಸುವಂತ ವಿಚಾರ ಆಗಿತ್ತು. ಆದರೆ ಈ ಗಾಳಿ ಸುದ್ದಿ ಯಾವ ಮೂಲದಿಂದ ಹರಿದಾಡಿತೋ ಎಂಬುದು ಮಾತ್ರ ಗೊತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!