
ಬೆಂಗಳೂರು[ಜ.29] ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಜೆಪಿ ಕುಮಾರಸ್ವಾಮಿ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದೆ.
ಕತೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಕುಮಾರಸ್ವಾಮಿ ಅವರೆ ಮಾಡುತ್ತಿದ್ದಾರೆ ಎಂದಿರುವ ಬಿಜೆಪಿ ‘ನಾಟಕ’ ಎಂದು ಇದನ್ನು ಕರೆದಿದೆ.
ಕುಮಾರಸ್ವಾಮಿ ಸಿಎಂ ಆದಾಗಿನಿಂದ ಹೇಳಿಕೆಗಳನ್ನು ಇಟ್ಟುಕೊಂಡು ಬಿಜೆಪಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದೆ. ಹಾಗಾದರೆ ಬಿಜೆಪಿ ಉಲ್ಲೇಖ ಮಾಡಿರುವ ಕುಮಾರಸ್ವಾಮಿ ಅವರ ಹೇಳಿಕೆಗಳು ಏನು?
ದೇವೇಗೌಡರ ಮೊಮ್ಮಗನ ‘ಕಾರು’ಬಾರು, ಇವರ ದರ್ಬಾರ್ ಕೇಳೋರಿಲ್ವಾ.?
1. ನಾನು ವಿಷಕಂಠ: ಕುಮಾರಸ್ವಾಮಿ ಸಿಎಂ ಆದ ಕೆಲ ದಿನಗಳ ನಂತರ ನಾನು ವಿಷಕಂಠ, ನೋವನ್ನು ನುಂಗಿ ಸರ್ಕಾರ ಮುನ್ನಡೆಸುತ್ತಿದ್ದೇನೆ. ನಾನು ಸಾಂದರ್ಭಿಕ ಶಿಶು ಎಂದು ಹೇಳಿದ್ದರು.
2. ನಾನೊಬ್ಬ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ: ಸರಕಾರದಲ್ಲಿ ನಾನೊಬ್ಬ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ ಎಂಬ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಹ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು.
3. ನಾನು ಯಾವಾಗ ಸಾಯುತ್ತೇನೆ ಗೊತ್ತಿಲ್ಲ: ಜೆಡಿಎಸ್ ಸಮಾವೇಶ ಒಂದರಲ್ಲಿ ಮಾತನಾಡುತ್ತ ಕುಮಾರಸ್ವಾಮಿ ಭಾವುಕರಾಗಿದ್ದರು. ನಾನು ಯಾವಾಗ ಸಾಯುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.
4. ಸಿಂಗಪುರದಲ್ಲಿ ಹೊಸ ವರ್ಷ: 2019ರ ಆರಂಭದಲ್ಲಿ ಕುಮಾರಸ್ವಾಮಿ ಸಿಂಗಪುರಕ್ಕೆ ತೆರಳಿದ್ದನ್ನು ಬಿಜೆಪಿ ತನ್ನ ಟೀಕೆಯಲ್ಲಿ ಬಳಸಿಕೊಂಡಿದೆ.
5 . ಸೀತಾರಾಮ ಕಲ್ಯಾಣ ವೀಕ್ಷಣೆ: ಸೀತಾರಾಮ ಕಲ್ಯಾಣ ವೀಕ್ಷಣೆ ಮಾಡಿದ್ದ ಕುಮಾರಸ್ವಾಮಿ ಮಗ ನಿಖಿಲ್ ಅಭಿನಯಕ್ಕೆ ಫುಲ್ ಖುಷ್ ಆಗಿದ್ದರು.
6. ರಾಜೀನಾಮೆ ಕೊಡಲು ಸಿದ್ಧ: ನಾನು ಕುರ್ಚಿಗೆ ಅಂಟಿಕೊಂಡು ನಿಂತಿಲ್ಲ. ರಾಜೀನಾಮೆ ನೀಡಲು ಸಿದ್ಧ ಎಂದು ಬೆಂಗಳೂರಿನಲ್ಲಿ ನೀಡಿದ ಹೇಳಿಕೆಯೂ ಚರ್ಚೆಗೆ ನಾಂದಿ ಹಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.