ಶಮನವಾಯ್ತಾ ಆನಂದ್ ಸಿಂಗ್ ಅಸಮಾಧಾನ : ಕೊಠಡಿ ಮುಂದೆ ನಾಮಫಲಕ

Kannadaprabha News   | Asianet News
Published : Aug 18, 2021, 01:53 PM ISTUpdated : Aug 18, 2021, 02:16 PM IST
ಶಮನವಾಯ್ತಾ ಆನಂದ್ ಸಿಂಗ್ ಅಸಮಾಧಾನ : ಕೊಠಡಿ ಮುಂದೆ ನಾಮಫಲಕ

ಸಾರಾಂಶ

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಸಚಿವ ಆನಂದ್ ಸಿಂಗ್  ವಿಕಾಸಸೌಧ ಕೊಠಡಿ ಬಾಗಿಲಿಗೆ ನಾಮಫಲಕ ಅಳವಡಿಸಿಕೊಂಡ ಸಚಿವ

ಬೆಂಗಳೂರು (ಅ.18): ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಸಚಿವ ಆನಂದ್ ಸಿಂಗ್ ಇದೀಗ ವಿಕಾಸಸೌಧ ಕೊಠಡಿ ಬಾಗಿಲಿಗೆ ನಾಮಫಲಕ ಅಳವಡಿಸಿಕೊಂಡಿದ್ದಾರೆ.  

ಇದರಿಂದ ತಮ್ಮ ಖಾತೆ ಬಗ್ಗೆ ತೀವ್ರ ಅಸಮಾದಾನ ಹೊಂದಿದ್ದ ಸಚಿವರು ಖಾತೆ ಹಂಚಿಕೆಯಾಗಿ ಬರೋಬ್ಬರಿ 12 ದಿನಗಳ ಬಳಿಕ ಖಾತೆಗಳ ಹೆಸರೊಂದಿಗೆ ತಮ್ಮ ನಾಮಫಲಕ ಹಾಕಿಸಿಕೊಂಡಿದ್ದಾರೆ. 

ಖಾತೆ ಕ್ಯಾತೆ: 'ಅಭಿ ಪಿಕ್ಚರ್ ಬಾಕಿ ಹೈ' ಎಂದ ಆನಂದ್ ಸಿಂಗ್

ಆದರೆ ಒಲ್ಲದ ಮನಸಿಂದಲೇ ನಾಮಫಲಕ ಹಾಕಿಸಿಕೊಂಡಿದ್ದಾರೆನ್ನಲಾಗಿದ್ದು, ತಮ್ಮ ಖಾತೆ ಬದಲಾವಣೆಗೆ ಪಟ್ಟು ಮುಂದುವರಿಸಿದ್ದಾರೆ. 

 ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಆಗಿ ಹನ್ನೆರಡು ದಿನಗಳು ಕಳೆದರೂ  ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಆನಂದ್ ಸಿಂಗ್ ವಿಧಾನಸೌಧಕ್ಕೆ ಕಾಲಿಟ್ಟಿರಲಿಲ್ಲ.

 ಒಂದು ಹಂತದಲ್ಲಿ ತಮಗೆ ನೀಡಿದ್ದ ಖಾತೆ ಬದಲಾವಣೆ ಮಾಡಿಕೊಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕೂಡಾ ಹೇಳಿದ್ದರು. ಇದೀಗ ನಾಮಫಲಕ ಹಾಕಿಸಿಕೊಂಡಿದ್ದರಿಂದ ಕೊಂಚವಾದರು ಸಮಾಧಾನವಾದರಾ ಎನ್ನುವ ಪ್ರಶ್ನೆಯೂ ಮೂಡಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!