ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಆರೋಪ ಪ್ರತ್ಯಾರೋಪದ ನಡುವೆ ಸಿಡಿದ ಬಾಂಬ್!

Published : Oct 21, 2024, 11:57 PM ISTUpdated : Oct 21, 2024, 11:58 PM IST
ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಆರೋಪ ಪ್ರತ್ಯಾರೋಪದ ನಡುವೆ ಸಿಡಿದ ಬಾಂಬ್!

ಸಾರಾಂಶ

ಭೈರತಿ ಸುರೇಶ್ ಮಾಡಿದ ಆರೋಪಕ್ಕೆ ಪ್ರತಿಯಾಗಿ ಇದೀಗ ಶೋಭ ಕರಂದ್ಲಾಜೆ ಅಷ್ಟೇ ಗಂಭೀರವಾದ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಶೋಭಾ ಹೇಳಿರುವುದು ಇದೀಗ ಕೋಲಾಹಲ ಸೃಷ್ಟಿಸಿದೆ.

ಬೆಂಗಳೂರು(ಅ.21) ಕರ್ನಾಟಕ ಉಪ ಚುನಾವಣೆ ಕಾವಿನ ನಡುವೆ ಮುಡಾ ಹಗರಣದಲ್ಲಿ ನಾಯಕರ ಆರೋಪ ಪ್ರತ್ಯಾರೋಪ ಇದೀಗ ವೈಯುಕ್ತಿಕ ಮಟ್ಟಕ್ಕೆ ಇಳಿದಿದೆ. ಮುಡಾ ಪ್ರಕರಣ ಸಂಬಂಧ ದಾಖಲೆಗಳನ್ನು ಭೈರತಿ ಸುರೇಶ್ ರಹಸ್ಯವಾಗಿ ಸಾಗಿಸಿ ಸುಟ್ಟಿದ್ದಾರೆ ಎಂದು ಶೋಭಕರಂದ್ಲಾಜೆ ಆರೋಪ ಇದೀಗ ಹಳೇ ಸಾವಿನ ಪ್ರಕರಣಕ್ಕೆ ಬಂದು ತಲುಪಿದೆ. ಭೈರತಿ ನೀಡಿದ ತಿರುಗೇಟಿಗೆ ಕೌಂಟರ್ ನೀಡಿರುವ ಶೋಭ ಕರಂದ್ಲಾಜೆ, ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪ ಇದೀಗ ಕೋಲಾಹಲ ಸೃಷ್ಟಿಸಿದೆ.

ಭೈರತಿ ಸುರೇಶ್ ಆರೋಪಕ್ಕೆ ತಿರುಗೇಟು ನೀಡಿದ ಶೋಭ ಕರಂದ್ಲಾಜೆ ಇಂದು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನವರ ಬಳಿ ನನ್ನ ಪ್ರಶ್ನೆ ಒಂದೇ ಇಂತವರನ್ನು(ಭೈರತಿ ಸುರೇಶ್) ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ. ಕೌರವರ ಜೊತೆ ಶಕುನಿ ಯಾಕೆ ಸೇರಿಕೊಂಡಿದ್ದಾರೆ. ಮುಖ್ಯಮಂತ್ರಿ ಹಿಂದೆ ಮುಂದೆ ಬೈರತಿ ಸುತ್ತುತ್ತಾ ಇರುತ್ತಾರೆ. ನಿಮ್ಮನ್ನು(ಸಿದ್ದರಾಮಯ್ಯ) ಉದ್ದಾರ ಮಾಡಲು ಭೈರತಿ ಈ ಕೆಲಸ ಮಾಡುತ್ತಿಲ್ಲ. ನಿಮ್ಮನ್ನು ಮುಗಿಸಲು ಈ ಪ್ರಯತ್ನಗಳನ್ನು ಬೈರತಿ ಸುರೇಶ್ ಮಾಡುತ್ತಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ ಕಿಡಿ

ರಾಕೇಶ್ ಸಿದ್ದರಾಮಯ್ಯನವರ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.ಒಪ್ಪಿಕೊಳ್ಳುತ್ತೀರಾ? ಸಿದ್ದರಾಮಯ್ಯನವರ ಆಸ್ತಿ ಒಡೆಯಲು, ಸಿದ್ದರಾಮಯ್ಯನವರು ದುಡ್ಡು ಹೊಡೆಯಲು, ಸಿದ್ದರಾಮನವರ ವಾರಸುದಾರಿಕೆ ಪಡೆಯಲು ಭೈರತಿ ಸುರೇಶ್ ಪ್ರಯತ್ನಿಸುತ್ತಿದ್ದಾರೆ. ನಾನೂ ಹೆಬ್ಬಾಳದಲ್ಲೇ ಇದ್ದೇನೆ. ಹೆಬ್ಬಾಳದಿಂದ ಓಡಿಸುವ ಕೆಲಸ ನಾವು ಮಾಡುತ್ತೇವೆ. ಮುಡಾ ಫೈಲ್ ಸುಟ್ಟು ಹಾಕಿದ್ದಾರೆ ಎಂದು ಹೇಳಿದರೆ ನನ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತೀರಿ. ನಾಲಗೆ ಬಿಗಿ ಹಿಡಿದು ಮಾತನಾಡಿ ಎಂದು ಶೋಭ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕು ಶೋಭ ಕರಂದ್ಲಾಜೆ ಈ ಗಂಭೀರ ಆರೋಪ ಮಾಡಲು ಕಾರಣ, ಭೈರತಿ ಮಾಡಿ ಆರೋಪಗಳು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪವವರ ಧರ್ಮ ಪತ್ನಿ ಸಾವಿನಲ್ಲಿ ಶೋಭ ಕರಂದ್ಲಾಜೆ ಪಾತ್ರವಿದೆ ಎಂದು ಆರೋಪಿಸಿದ್ದರು. ಶೋಭ ಕರಂದ್ಲಾಜೆ ಬಂಧಿಸಿದರೆ ಸತ್ಯ ಹೊರಗೆ ಬರಲಿದೆ. ಇದರ ತನಿಖೆ ಅಗತ್ಯವಿದೆ ಎಂದು ಭೈರತಿ ಸುರೇಶ್ ಆರೋಪಿಸಿದ್ದರು. ಇದೀಗ ಈ ಆರೋಪಕ್ಕೆ ಶೋಭ ಕರಂದ್ಲಾಜೆ ರಾಕೇಶ್ ಸಿದ್ದರಾಮಯ್ಯ ಸಾವಿನ ಘಟನೆ ತೆಗೆದಿಟ್ಟಿದ್ದಾರೆ.

ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ- ರೇಣುಕಾಚಾರ್ಯ 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ರಾಜ್ಯಪಾಲರನ್ನು ಅಡ್ಡಗಟ್ಟಿ ಜುಬ್ಬಾ ಹರಿದುಕೊಂಡ ಬಿ.ಕೆ. ಹರಿಪ್ರಸಾದ್; ಅಡ್ಡ ಬಂದವರನ್ನ ಎತ್ತಿ ಹಾಕಿದ ಮಾರ್ಷಲ್‌ಗಳು