ಯತ್ನಾಳ್‌ ಹೇಳಿಕೆ ಬರಿ ಊಹಾಪೋಹ: ಸಂಸದ ಜೊಲ್ಲೆ

Published : Aug 16, 2023, 10:44 PM IST
ಯತ್ನಾಳ್‌ ಹೇಳಿಕೆ ಬರಿ ಊಹಾಪೋಹ: ಸಂಸದ ಜೊಲ್ಲೆ

ಸಾರಾಂಶ

ಯತ್ನಾಳ್‌ ಹೇಳಿಕೆ ವಿಚಾರವಾಗಿ ಕೆಲ ಕಡೆಗಳಲ್ಲಿ ಊಹಾಪೋಹಗಳು ಹರಡುತ್ತಿರುತ್ತವೆ. ಆದರೂ ಒಳಗೊಳಗೆ ಏನಾದ್ರೂ ಇರಬಹುದೆಂದು ಅನಿಸುತ್ತದೆ. ಎಲ್ಲರೂ ಆ ರೀತಿ ಹೇಳುತ್ತಾರೆ ಅಷ್ಟೆ, ನಾವು ಹೇಳುತ್ತೇವೆ. ಸರ್ಕಾರ ಉರುಳುತ್ತೆ. ಆದರೆ, ಸಾಧ್ಯವಾಗುತ್ತೋ ಇಲ್ಲೋ ಎಂಬುವುದು ಅಂದು ಗೊತ್ತಾಗೊದು ಎಂದ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ 

ಚಿಕ್ಕೋಡಿ(ಆ.16):  ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕೇವಲ 5 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಹೇಳಿಕೆ ಬರಿ ಊಹಾಪೋಹ ಎಂದು ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಹೇಳಿಕೆ ವಿಚಾರವಾಗಿ ಕೆಲ ಕಡೆಗಳಲ್ಲಿ ಊಹಾಪೋಹಗಳು ಹರಡುತ್ತಿರುತ್ತವೆ. ಆದರೂ ಒಳಗೊಳಗೆ ಏನಾದ್ರೂ ಇರಬಹುದೆಂದು ಅನಿಸುತ್ತದೆ. ಎಲ್ಲರೂ ಆ ರೀತಿ ಹೇಳುತ್ತಾರೆ ಅಷ್ಟೆ, ನಾವು ಹೇಳುತ್ತೇವೆ. ಸರ್ಕಾರ ಉರುಳುತ್ತೆ. ಆದರೆ, ಸಾಧ್ಯವಾಗುತ್ತೋ ಇಲ್ಲೋ ಎಂಬುವುದು ಅಂದು ಗೊತ್ತಾಗೊದು ಎಂದರು.

ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ರಮೇಶ ಜಾರಕಿಹೊಳಿ ಹಾಗೂ ಬಿ.ಎಲ್‌.ಸಂತೋಷ ಭೇಟಿ ವಿಚಾರ ಅವರು, ಪಕ್ಷದ ಮುಖಂಡರು ನಾವು ಭೇಟಿಯಾಗುತ್ತೇವೆ ಅವರು ಸಹ ಭೇಟಿ ಆಗ್ತಾರೆ ಇದು ಸಹಜ. ಲಕ್ಷ್ಮಣ ಸವದಿ ಪೆನ್‌ಡೈವ್‌ ವಿಚಾರ ಅದು ಹಾಸ್ಯಾಸ್ಪದ ಹೇಳಿಕೆ. ಯಾರ ಹತ್ತಿರನೂ ಪೆನ್‌ಡೈವ್‌ ಇಲ್ಲ. ಬರಿ ಸುಮ್ಮನೆ ಹೇಳುತ್ತಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್