ತಮ್ಮ ಮಕ್ಕಳ ಸಲುವಾಗಿ ರಾಜಕಾರಣ ಮಾಡಿದ್ರೆ ನಾವು ಗಂಟೆ ಬಾರಿಸ್ಕೊಂಡು ಕೂಡಬೇಕಾ?: ಮೂವರು ನಾಯಕರ ವಿರುದ್ಧ ಯತ್ನಾಳ್ ಕಿಡಿ

By Ravi JanekalFirst Published Mar 12, 2024, 9:16 PM IST
Highlights

ಕರ್ನಾಟಕದಲ್ಲಿ ಕೆಲವು ಸ್ವಾಮಿಜಿಗಳಿದ್ದಾರೆ. ಅವರಿಗೆ ಭಕ್ತರ ಮೇಲೆ ಪ್ರೀತಿ ಇಲ್ಲ. ಅವರ ಪ್ರೀತಿ ಜಾಸ್ತಿ ಇರೋದು ಮೂರು ಕುಟುಂಬಗಳ ಮೇಲೆ ಮಾತ್ರ. ಯಡಿಯೂರಪ್ಪ, ಖಂಡ್ರೆ, ಶಾಮನೂರು ಫ್ಯಾಮಿಲಿ ಮೇಲೆ ಕೆಲ ಸ್ವಾಮೀಗಳ ಪ್ರೀತಿ ಜಾಸ್ತಿಯಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.

ಕಲಬುರಗಿ: (ಮಾ.12): ಕರ್ನಾಟಕದಲ್ಲಿ ಕೆಲವು ಸ್ವಾಮಿಜಿಗಳಿದ್ದಾರೆ. ಅವರಿಗೆ ಭಕ್ತರ ಮೇಲೆ ಪ್ರೀತಿ ಇಲ್ಲ. ಅವರ ಪ್ರೀತಿ ಜಾಸ್ತಿ ಇರೋದು ಮೂರು ಕುಟುಂಬಗಳ ಮೇಲೆ ಮಾತ್ರ. ಯಡಿಯೂರಪ್ಪ, ಖಂಡ್ರೆ, ಶಾಮನೂರು ಫ್ಯಾಮಿಲಿ ಮೇಲೆ ಕೆಲ ಸ್ವಾಮೀಗಳ ಪ್ರೀತಿ ಜಾಸ್ತಿಯಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.

ಕಲಬುರಗಿಯಲ್ಲಿ ಇಂದು ಪಂಚಮಸಾಲಿ ಸಮುದಾಯದ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಾಸಕ ಯತ್ನಾಳ್,  ವಿಜಯೇಂದ್ರನನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡೋದಕ್ಕೆ ಬಡಿದಾಡ್ತಿದ್ದಾರೆ. ಈ ಮೂರು ಕುಟುಂಬಗಳು ಜನರಿಗಾಗಿ ಕೆಲಸ ಮಾಡ್ತಿಲ್ಲ. ಬದಲಾಗಿ ತಮ್ಮ ತಮ್ಮ ಮಕ್ಕಳ ಸಲುವಾಗಿ ಕೆಲಸ ಮಾಡ್ತಿದ್ದಾರೆ. ಇವರು ತಮ್ಮ ಮಕ್ಕಳ ಸಲುವಾಗಿ ಮಾಡಿದ್ರೆ ನಾವು ಗಂಟೆ ಬಾರಿಸಿಕೊಂಡು ಕೂಡೋಣ್ವಾ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಸಮಾವೇಶದಲ್ಲಿ ವೇದಿಕೆ ಮೇಲೆ ಸಚಿವ ಹೆಚ್‌ಸಿ ಮಹದೇವಪ್ಪಗೆ ಮುಖಭಂಗ

ನಮ್ಮದೇ ಜಾತಿಯ ಕೆಲ ಸಚಿವರು, ನಮ್ಮ ಸ್ವಾಮೀಜಿಯವರ ಪಾದಯಾತ್ರೆ ರದ್ದು ಮಾಡೋಕೆ ಕಸರತ್ತು ನಡೆಸಿದರು. ಆದ್ರೂ ಕೂಡ ಎಲ್ಲ ಅಡೆತಡೆಗಳ ಮಧ್ಯೆ ಜಯಮೃತ್ಯುಂಜಯ ಸ್ವಾಮೀಗಳೂ 750 ಕಿಮೀ ಪಾದಯಾತ್ರೆ ಮಾಡಿದ್ರು. ಹಿಂದಿನ ಸರ್ಕಾರದಲ್ಲಿ ಮೀಸಲಾತಿ ಕೊಡಲಿಲ್ಲ. ಇವಾಗ ಮತ್ತೆ ಹೊಸ ನಾಟಕ ಕಂಪೆನಿ ಬಂದಿದೆ. ಹೋರಾಟ ಯಾಕೆ ಮಾಡ್ತೀರಿ ನಾವು ಮೀಸಲಾತಿ ಕೊಡಿಸ್ತೇವೆ ಅಂತಾ ಹೇಳ್ತಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ ಒಂದು ನಾಟಕ ಕಂಪೆನಿ ಇತ್ತು. ಇವಾಗ ಮತ್ತೊಂದು ನಾಟಕ ಕಂಪೆನಿ ಬಂದಿದೆ. ಆಗ ಮೀಸಲಾತಿಗಾಗಿ ಪ್ರಾಣ ಕೊಡ್ತಿವಿ ಅಂತಾ ಹೇಳಿದ್ರು, ಇವಾಗ ಬೇರೆಯದ್ದೇ ನಾಟಕ ಮಾಡ್ತಿದ್ದಾರೆ ಎಂದು ಶಾಮನೂರು, ಯಡಿಯೂರಪ್ಪ, ಖಂಡ್ರೆ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

click me!