ಕಳಪೆ ಸಾಧನೆ ಮಾಡಿದ ಸಚಿವರ ಕೈಬಿ​ಡಿ: ಯತ್ನಾಳ

By Suvarna NewsFirst Published Feb 4, 2020, 10:31 AM IST
Highlights

ಜೆಡಿಎಸ್, ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅವರಲ್ಲಿ ಹಲವರೀಗ ಮತ್ತೆ ನಡೆದ ಉಪ ಚುನಾವಣೆಯಲ್ಲಿಯೂ ಗೆದ್ದಿದ್ದಾರೆ. ಯಾವಾಗ ಅವರಿಗೆ ಮಂತ್ರಿಗಿರಿ ನೀಡುವ ಬಗ್ಗೆ ಚರ್ಚೆ ಆರಂಭವಾಯಿತೋ, ಮೂಲ ಬಿಜೆಪಿಗರು ನಮಗೂ ಬೇಕು ಸಚಿವ ಸ್ಥಾನವೆಂದು ಕೂತಿದ್ದಾರೆ....

ವಿಜಯಪುರ (ಫೆ.4): ಕಳಪೆ ಸಾಧನೆ ಮಾಡಿದ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ವಿಧಾನಸೌಧ, ವಿಕಾಸಸೌಧ ಕಡೆ ಸುಳಿಯುತ್ತಿಲ್ಲ. ಅವರ ಆಪ್ತ ಸಹಾಯಕರೂ ಸಿಗುತ್ತಿಲ್ಲ. ಶಾಸಕರಾದ ನಾವೇ ಅವರನ್ನು ಹುಡುಕಾಡಬೇಕಿದೆ ಎಂದು ಸ್ವಪಕ್ಷೀಯ ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು

ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು. ಸಚಿವ ಸ್ಥಾನ ಕಳೆದಕೊಂಡರೆ ಅವರೇನೂ ಬಂಡಾಯವೇಳುವುದಿಲ್ಲ, ಬಂಡಾಯವೆದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗುವುದಿಲ್ಲ ಎಂದರು.

ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಕಾಡಿಬೇಡಿ ಮಂತ್ರಿ ಆಗುವ ಸ್ವಭಾವ ನನ್ನದಲ್ಲ, ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ನನ್ನದೇ ಆದ ಸಾಮ್ರಾಜ್ಯ ನಿರ್ಮಿಸಿದ್ದೇನೆ. ಬಯೋಡೆಟಾ ಹಿಡಿದುಕೊಂಡು ಓಡಾಡುವ ರಾಜಕಾರಣಿ ನಾನಲ್ಲ ಎಂದಿದ್ದಾರೆ.

ಎಚ್‌ಡಿಕೆ ಮಿಣ ಮಿಣ ಪೌಡರಿಗೆ ಯತ್ನಾಳ್ ಕಮೆಂಟ್ ಇದು

ಸುಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು. ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು. ಸಚಿವರ ಮೌಲ್ಯಮಾಪನ ನಡೆಸಬೇಕು ಎಂದು ಸಿಎಂ ಅವರಿಗೆ ಮನವಿ ಮಾಡಿದ್ದೇನೆ ಎಂದರು.

click me!