ಕುಮಾರಸ್ವಾಮಿ ಪೆನ್‌ಡ್ರೈವ್‌ ಬುಟ್ಟಿ ಒಳಗಿನ ಹಾವು ಇದ್ದಂತೆ: ಜಮೀರ್‌ ಅಹಮದ್‌

By Kannadaprabha NewsFirst Published Aug 10, 2023, 12:30 AM IST
Highlights

ಕುಮಾರಸ್ವಾಮಿ ಬಳಿ ಪೆನ್‌ಡ್ರೈವ್‌ ಇದ್ದಿದ್ದರೆ ಇಷ್ಟು ದಿನ ಯಾಕೆ ಬಿಡಲಿಲ್ಲ? ಬುಟ್ಟಿಯೊಳಗೆ ಹಾವಿದೆ ಎಂದು ಭಯ ಬೀಳಿಸುವುದಕ್ಕೆ ಈ ರೀತಿ ಹೇಳುತ್ತಿದ್ದಾರಷ್ಟೆ. ಇದು ಮುಗಿದ ವಿಷಯ. ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ, ಆದರೆ, ಹಾವಿದೆ ಎನ್ನುತ್ತಿದ್ದಾರೆ ಎಂದ ಸಚಿವ ಜಮೀರ್‌ ಅಹಮದ್‌ ಖಾನ್‌ 

ಹೊಸಪೇಟೆ(ಆ.10): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿರುವ ಪೆನ್‌ಡ್ರೈವ್‌ ಎಂಬುದು ಬುಟ್ಟಿಯೊಳಗಿನ ಹಾವು ಇದ್ದಂತೆ. ಬರಿ ಬುಸ್‌ ಬುಸ್‌ ಎನ್ನುತ್ತದೆ. ಹೊರಗೆ ಬರುವುದಿಲ್ಲ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಲೇವಡಿ ಮಾಡಿದರು. 

ಕುಮಾರಸ್ವಾಮಿ ಬಳಿ ಪೆನ್‌ಡ್ರೈವ್‌ ಇದ್ದಿದ್ದರೆ ಇಷ್ಟು ದಿನ ಯಾಕೆ ಬಿಡಲಿಲ್ಲ? ಬುಟ್ಟಿಯೊಳಗೆ ಹಾವಿದೆ ಎಂದು ಭಯ ಬೀಳಿಸುವುದಕ್ಕೆ ಈ ರೀತಿ ಹೇಳುತ್ತಿದ್ದಾರಷ್ಟೆ. ಇದು ಮುಗಿದ ವಿಷಯ. ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ, ಆದರೆ, ಹಾವಿದೆ ಎನ್ನುತ್ತಿದ್ದಾರೆ ಎಂದರು. 

ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

ಹಾಗೇ ಕೃಷಿ ಸಚಿವರ ವಿರುದ್ಧ ಕೆಲ ವ್ಯಕ್ತಿಗಳು ನಕಲಿ ಪತ್ರ ವೈರಲ್‌ ಮಾಡಿದ್ದಾರೆ. ಯಾರ ಹೆಸರಿನಲ್ಲಿ ಪತ್ರ ವೈರಲ್‌ ಆಗಿದೆಯೋ ಆ ಅಧಿಕಾರಿಗಳೇ ಈಗ ಆ ಪತ್ರ ನಾವು ಬರೆದಿಲ್ಲ ಅನ್ನುತ್ತಿದ್ದಾರೆ. ಅದರ ಬಗ್ಗೆ ಅಧಿಕಾರಿಗಳು ರೀ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಇನ್ನು, ಈ ಪ್ರಕರಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪಾತ್ರ ಇಲ್ಲಾ ಬಿಡಿ ಎಂದು ವ್ಯಂಗ್ಯವಾಡಿದರು.

click me!