
ಕಲಬುರಗಿ(ಜೂ.25): ಜಿಹಾದಿಗೆ ಓಟ್ ಹಾಕ್ರಿ ಅಂತ ಕಾಂಗ್ರೆಸ್ನವರು ಕರೆ ಕೊಟ್ಟಿದ್ರಲ್ಲ. ಕೆಲವು ಪಕ್ಷಗಳಿಗೆ ಮತ್ತು ಕೆಲವು ಸಮುದಾಯಗಳಿಗೆ ಭಾರತ್ ಮಾತಾ ಕೀ ಜೈ ಎನ್ನುವರು ಗೆಲ್ಲಬಾರದು. ಕೆಲವು ಸಮುದಾಯಗಳಿಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರೇ ಗೆಲ್ಲಬೇಕು. ಹಾಗಾಗಿಯೇ ವೋಟ್ ಜಿಹಾದ್ಗೆ ಕರೆ ಕೊಟ್ಟಿದ್ದರು. ರಾಷ್ಟ್ರಭಕ್ತರು ಲೋಕಸಭೆಗೆ ಹೋಗಬಾರದು ಅಂತ ಕರೆ ಕೊಟ್ಟರು. ವೋಟ್ ಜಿಹಾದಿ ಕರೆಗೆ ಬೆಂಬಲಿಸಿರೋದಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಸತ್ಯವನ್ನೇ ಹೇಳಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಮುಸ್ಲಿಂರು ಮತ ಹಾಕಿರೋದ್ರಿಂದಲೇ ಲೋಕಸಭೆಯಲ್ಲಿ ಸಾಗರ್ ಖಂಡ್ರೆ ಗೆದ್ದಿರೋದು ಎನ್ನುವ ಜಮೀರ್ ಹೇಳಿಕೆ ವಿಚಾರದ ಬಗ್ಗೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ, ವೋಟ್ ಜಿಹಾದ್ ಕಾರಣಕ್ಕೆ ತಾನೆ ವಿಧಾನಸೌಧದಲ್ಲಿ ಬಂದು ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಹಾಕಿರೋದು. ನಮ್ಮಂತಹವರಿಗೆ ಗೆಲ್ಲಿಸಿದ್ರೆ ಭಾರತ್ ಮಾತಾ ಕೀ ಜೈ , ಜೈ ಶ್ರೀರಾಮ ಅಂತಾ ಕೂಗ್ತಿದ್ವಿ ಅಂತ ಹೇಳಿದ್ದಾರೆ.
ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ
ಜಮೀರ್ ಅಹ್ಮದ್ ಕಮ್ಯೂನಲ್ ಅಲ್ಲವೇ ಅಲ್ಲ, ಅವರೊಬ್ಬ ಮೋಸ್ಟ್ ಸೆಕ್ಯೂಲರ್. ಎಷ್ಟರ ಮಟ್ಟಿಗೆ ಸೆಕ್ಯೂಲರ್ ಅಂದ್ರೆ ಪೈಗಂಬರ್ ಕೂಡ ಅವರ ಸಮ ಇರೋದಕ್ಕೆ ಸಾಧ್ಯವೇ ಇಲ್ಲ ಎಂದು ಜಮೀರ್ ಅಹ್ಮದ್ ಬಗ್ಗೆ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.