Karnataka Politics: ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡೋಲ್ಲ: ಅಶ್ವತ್ಥನಾರಾಯಣ

Published : Apr 16, 2022, 02:45 PM IST
Karnataka Politics: ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡೋಲ್ಲ: ಅಶ್ವತ್ಥನಾರಾಯಣ

ಸಾರಾಂಶ

ಎಚ್‌.ಡಿ.ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡುವುದಿಲ್ಲ. ಅವರಿಗೆ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುವುದೇ ಇಲ್ಲ. ರಾಜಕೀಯ ಮಾಡುವುದು ಬಿಟ್ಟರೆ ಅವರಿಗೇನೂ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.

ಮಂಡ್ಯ (ಏ.16): ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಯಾರನ್ನೂ ಸಿಎಂ ಮಾಡುವುದಿಲ್ಲ. ಅವರಿಗೆ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುವುದೇ ಇಲ್ಲ. ರಾಜಕೀಯ (Politics) ಮಾಡುವುದು ಬಿಟ್ಟರೆ ಅವರಿಗೇನೂ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ (Dr CN Ashwath Narayan) ವ್ಯಂಗ್ಯವಾಡಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ಗೆ ಕಾಣುವುದು ಕುಮಾರಸ್ವಾಮಿ ಮತ್ತು ಅವರ ಕುಟುಂಬ ಮಾತ್ರ. ನಮ್ಮ ಪಕ್ಷದಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳುತ್ತಾರಷ್ಟೇ. ಅವರು ಯಾರನ್ನೂ ಸಿಎಂ ಹುದ್ದೆಗೆ ಕೂರಿಸುವುದಿಲ್ಲ. ಮಣ್ಣು ಸೇರುವುದರೊಳಗೆ ದಲಿತ ಸಿಎಂ ಮಾಡುತ್ತೇವೆ ಎನ್ನುವುದು ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಆಡುತ್ತಿರುವುದು ಹೊಸ ನಾಟಕ. ದಲಿತ ಮತಗಳನ್ನು ಸೆಳೆಯುವ ತಂತ್ರಗಾರಿಕೆಯಷ್ಟೇ ಎಂದು ಚಿವುಟಿದರು.

ಮಂತ್ರಿಗಿರಿಯನ್ನೇ ಕೊಡಲಿಲ್ಲ: ಜೆಡಿಎಸ್‌ (JDS) ರಾಜ್ಯಾಧ್ಯಕ್ಷರಾಗಿದ್ದ ಎಚ್‌.ವಿಶ್ವನಾಥ್‌ (H Vishwanath) ಅವರನ್ನೇ ಮಂತ್ರಿ ಮಾಡಲಿಲ್ಲ. ಜೆಡಿಎಸ್‌ನಿಂದ ಗೆದ್ದಿದ್ದ ನಾಲ್ಕು ಜನ ಹಿಂದುಳಿದ ವರ್ಗದವರಿಗೂ ಮಂತ್ರಿಗಿರಿ ಕೊಡಲಿಲ್ಲ ಎಂದ ಮೇಲೆ ದಲಿತ ಸಿಎಂ (Dalit CM) ಮಾಡುತ್ತಾರೆ ಎನ್ನುವುದು ಕನಸಿನ ಮಾತು. ಇನ್ನು ಬಿ​ಜೆ​ಪಿ​ಯಲ್ಲಿ ಯಾರು ಏನು ಬೇ​ಕಾ​ದರೂ ಆ​ಗ​ಬ​ಹುದು. ಸಂಪೂರ್ಣವಾಗಿ ಹಿಂದು​ಳಿ​ದ​ವ​ರಲ್ಲಿ ನಮ್ಮ ದೇ​ಶದ ಕಾ​ರ‍್ಯಕರ್ತರಾ​ಗಿದ್ದ ಪ್ರ​ಧಾನಿ ನ​ರೇಂದ್ರ​ ಮೋದಿ, ಜೆ.ಪಿ.ನಡ್ಡಾ, ಅ​ಮಿತ್‌ ಶಾ, ಅಷ್ಟೇ ಏಕೆ ದಲಿತ ಸಮುದಾಯದ ರಾಮ​ನಾಥ್‌ ಕೋ​ವಿಂದ್‌ ರಾ​ಷ್ಟ್ರದ ಉ​ನ್ನತ ಹು​ದ್ದೆ​ಯನ್ನು ಅ​ಲಂಕ​ರಿಸಿ​ದ್ದಾರೆ. ಇಷ್ಟುಸಾಕ್ಷ್ಯ ಸಾಕಲ್ಲವೇ ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು.

ಸಂತೋಷ್‌ ಆತ್ಮಹತ್ಯೆ ಪ್ರಕರಣ ಹೆಬ್ಬಾಳ್ಕರ್‌ ತಲೆಗೆ ಸುತ್ತಿಕೊಳ್ಳಬಹುದು: ಹೊಸ ಬಾಂಬ್‌ ಸಿಡಿಸಿದ ಅಶ್ವತ್ಥ್‌

ಹೊಸ ನಾಟಕ ಶುರು: ಚುನಾವಣೆ ಸಮೀಪಿಸಿದಾಗಲೆಲ್ಲಾ ಹೊಸ ನಾಟಕವಾಡುತ್ತಾ ಜನರ ಮುಂದೆ ಬರುತ್ತಾರೆ. ಕುಮಾರಸ್ವಾಮಿ ಹುಟ್ಟಿದ್ದೇ ನಾಟಕದಲ್ಲಿ. ಜನರೆದುರು ಕಣ್ಣೀರು ಸುರಿಸುವುದು, ನಂಬಿದವರಿಗೆ ಮೋಸ ಮಾಡುವ ಕಲೆಯನ್ನು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ. ಇದುವರೆಗೂ ಅವರು ಜನರಿಗೆ ಮೋಸ ಮಾಡಿಕೊಂಡೇ ಬಂದಿದ್ದಾರೆ ಎಂದು ಟೀಕಿಸಿದರು. ಜಲಧಾರೆ ಕಾರ್ಯಕ್ರಮವೂ ಕುಮಾರಸ್ವಾಮಿ ನಾಟಕದ ಒಂದು ಭಾಗ. ರಾಮನಗರದಲ್ಲಿ ಏತ ನೀರಾವರಿಯನ್ನು ತೋರಿಸಿಕೊಟ್ಟಿದ್ದು ಬಿಜೆಪಿ. ಬಿ.​ಎಸ್‌.ಯ​ಡಿ​ಯೂ​ರಪ್ಪ ಅ​ವರು ಮು​ಖ್ಯ​ಮಂತ್ರಿ​ಯಾ​ಗಿದ್ದ ಅ​ವ​ಧಿಯಲ್ಲಿ ಚ​ನ್ನ​ಪ​ಟ್ಟ​ಣ​ದಲ್ಲಿ ಏ​ತ ನೀ​ರಾ​ವರಿ ಯೋ​ಜನೆ ರೂ​ಪಿಸಿದ್ದರು. ಇದಕ್ಕಿಂತ ಬೇರೆ ಬೇಕಾ ಎಂದ ಸಚಿವರು, ಸುಳ್ಳು ಹೇಳುವುದು ಕುಮಾರಸ್ವಾಮಿ ಅವರ ಕಾಯಕ. ಇದರಿಂದ ಕುಮಾರಸ್ವಾಮಿ ತಾವೂ ಹಾಳಾಗುವುದಲ್ಲದೇ ಅವರನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ಈಈ ರೀತಿ ಸುಳ್ಳು ಹೇಳಿಕೊಂಡೇ ದಕ್ಷಿಣ ಕರ್ನಾಟಕಕ್ಕೆ ಕುಮಾರಸ್ವಾಮಿ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಚಾಟಿ ಬೀಸಿದರು.

ಕುಮಾರಸ್ವಾಮಿ ಸಹವಾಸ ಬೇಡ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಕೈಜೋಡಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಕುಮಾರಸ್ವಾಮಿ ಸಹವಾಸ ಬೇಡ ಸ್ವಾಮಿ. ನಾವು ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಸಂಬಂಧ ಮತ್ತು ಒಡಂಬಡಿಕೆ ಇಟ್ಟುಕೊಳ್ಳುವುದಿಲ್ಲ. ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಷ್ಟುಪಾಪದ ಕೆಲಸ ಮತ್ತೊಂದಿಲ್ಲ. ಜನ ತಿರಸ್ಕಾರ ಮಾಡಿರುವವರನ್ನು ನಾವೂ ಕೂಡ ತಿರಸ್ಕಾರ ಮಾಡುತ್ತೇವೆ. ನಾವು ಜೆಡಿಎಸ್‌ನ್ನು ಬಿಜೆಪಿಯಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಖಡಕ್ಕಾಗಿ ಹೇಳಿದರು.

Karnataka Politics: ನನ್ನತ್ರ ಎಲ್ಲರ ಫೈಲಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಭಾಸ್ಕರ್‌ ರಾವ್‌

ಮೈಷುಗರ್‌ ಆರಂಭಕ್ಕೆ ಅಡ್ಡಗಾಲು: ಕು​ಮಾ​ರ​ಸ್ವಾಮಿ ಅ​ವ​ರಿಗೆ ರಾ​ಜ​ಕೀಯ ಮಾ​ಡು​ವುದೇ ಬ​ದುಕು, ಇ​ದನ್ನು ಬಿ​ಟ್ಟರೆ ಬೇರೆ ಜೀ​ವ​ನವೇ ಇಲ್ಲ. ದ​ಕ್ಷಿಣ ಕರ್ನಾಟ​ಕಕ್ಕೆ ಅ​ವರು ಮಾ​ಡಿ​ರುವ ಅ​ನ್ಯಾ​ಯವೇ ಸಾಕ್ಷಿ. ಮಂಡ್ಯ ಜಿ​ಲ್ಲೆಯ ರೈ​ತರ ಜೀ​ವ​ನಾ​ಡಿ​ಯಾ​ಗಿ​ರುವ ಮೈ​ಷು​ಗರ್‌ ಕಾರ್ಖಾನೆ​ಯನ್ನು ನ​ಡೆ​ಸ​ಲಾ​ಗ​ಲಿಲ್ಲ ಎಂದರೆ ಏ​ನ​ನ್ನ​ಬೇಕು. ಹೋ​ಗಲಿ ನಾವೇ ಪು​ನ​ಶ್ಚೇ​ತನ ಮಾ​ಡೋಣ ಎಂದರೂ ಅ​ದಕ್ಕೂ ಅ​ಡ್ಡಿ​ಪ​ಡಿ​ಸು​ತ್ತಾರೆ. ಅ​ವ​ರಿಗೆ ರಾ​ಜ​ಕೀಯ ಮಾ​ಡು​ವುದು ಬಿ​ಟ್ಟರೇ ಬೇ​ರೇನೂ ಗೊ​ತ್ತಿಲ್ಲ ಎಂದು ಹ​ರಿ​ಹಾ​ಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ