Anti conversion Bill : ಕಾಂಗ್ರೆಸ್ - ಬಿಜೆಪಿ ನಡುವೆ ಮ್ಯಾಚ್‌ ಫಿಕ್ಸಿಂಗ್‌ : ರೇವಣ್ಣ

Kannadaprabha News   | Asianet News
Published : Dec 24, 2021, 10:32 AM IST
Anti conversion Bill : ಕಾಂಗ್ರೆಸ್ -  ಬಿಜೆಪಿ ನಡುವೆ ಮ್ಯಾಚ್‌ ಫಿಕ್ಸಿಂಗ್‌ : ರೇವಣ್ಣ

ಸಾರಾಂಶ

 ಬಿಜೆಪಿ ಹಾಗೂ ಕಾಂಗ್ರೆಸ್‌ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಮ್ಯಾಚ್‌ ಫಿಕ್ಸಿಂಗ್‌  ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಮತಾಂತರ ನಿಷೇಧ ಮಸೂದೆ ತಂದಿವೆ ಜೆಡಿಎಸ್‌ ಅನ್ನು ಬಿಜೆಪಿಯ ಬಿ-ಟೀಂ ಎನ್ನುವ ಕಾಂಗ್ರೆಸ್ಸಿನವರೇ ಬಿಜೆಪಿ ಜತೆ ಶಾಮೀಲಾಗಿ ವಿಧೇಯಕ ತಂದಿದ್ದಾರೆ

ವಿಧಾನಸಭೆ (ಡಿ.24) :  ಬಿಜೆಪಿ  (BJP) ಹಾಗೂ ಕಾಂಗ್ರೆಸ್‌ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಮತಾಂತರ ನಿಷೇಧ ಮಸೂದೆ ತಂದಿವೆ. ಜೆಡಿಎಸ್‌ (JDS) ಅನ್ನು ಬಿಜೆಪಿಯ (BJP) ಬಿ-ಟೀಂ ಎನ್ನುವ ಕಾಂಗ್ರೆಸ್ಸಿನವರೇ (Congress) ಬಿಜೆಪಿ ಜತೆ ಶಾಮೀಲಾಗಿ ವಿಧೇಯಕ ತಂದಿದ್ದಾರೆ ಎಂದು ಜೆಡಿಎಸ್‌ (JDS) ಸದಸ್ಯ ಎಚ್‌.ಡಿ. ರೇವಣ್ಣ ಆರೋಪ ಮಾಡಿದರು. ಮತಾಂತರ ನಿಷೇಧ ಮಸೂದೆ ಕುರಿತು ಮಾತನಾಡಿದ ಅವರು, 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೇ ವಿಧೇಯಕವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಬರೆದಿದ್ದಾರೆ. ಅವರು ಕಡತ ವಾಪಸು ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದರೆ ಈ ಕ್ಷಣವೇ ರಾಜೀನಾಮೆ (Resignation) ನೀಡುತ್ತೇನೆ. ಆಗಿನಿಂದಲೂ ಚರ್ಚಿಸಿ ಈಗ ಒಟ್ಟಾಗಿ ಒಪ್ಪಂದ ಮಾಡಿಕೊಂಡು ವಿಧೇಯಕ ತಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಚುನಾವಣೆ (Election) ಬಂದಾಗ ಕೋಮುವಾದಿಗಳನ್ನು ದೂರ ಇಡಬೇಕು ಎನ್ನುವ ನೀವೇ ಬಿಜೆಪಿ (BJP) ಜತೆ ಸೇರಿಕೊಂಡು ಬಿಲ್‌ ತಂದಿದ್ದೀರಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಈ ಮಾತಿಗೆ ಸಿದ್ದರಾಮಯ್ಯ, ನನ್ನ ಜೀವನದಲ್ಲೇ ಮ್ಯಾಚ್‌ ಫಿಕ್ಸಿಂಗ್‌ ರಾಜಕೀಯ ನನಗೆ ಗೊತ್ತಿಲ್ಲ. ಯಾವ ಮುಖ್ಯಮಂತ್ರಿ, ಸಚಿವರ ಮನೆಗೂ ಹೋದವನಲ್ಲ. ನನ್ನದು ನೇರ ರಾಜಕಾರಣ ಎಂದು ಪ್ರತಿಕ್ರಿಯಿಸಿದರು.

ಮಸೂದೆ ತನ್ನಿ :  ಕುಟುಂಬ ರಾಜಕಾರಣಕ್ಕೆ (Family Politics) ಇತಿಶ್ರೀ ಹಾಡಲು ಮಸೂದೆ ತಂದು ರಾಷ್ಟ್ರೀಯ ಪಕ್ಷಗಳು ಇದಕ್ಕೆ ಒಪ್ಪಿಗೆ ಸೂಚಿಸಲಿ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಸವಾಲು ಹಾಕಿದ್ದಾರೆ. ತಮ್ಮ ಪುತ್ರ ಸೂರಜ್‌ ರೇವಣ್ಣ (Suraj Revanna) ರಾಜಕೀಯಕ್ಕೆ (Politics) ಪ್ರವೇಶಿಸಿದ ಹಿನ್ನೆಲೆಯಲ್ಲಿ ವ್ಯಕ್ತವಾದ ಟೀಕೆಗಳಿಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಟುಂಬ ರಾಜಕಾರಣಕ್ಕೆ ಇತಿ ಶ್ರೀ ಸಂಬಂಧ ಎರಡು ರಾಷ್ಟ್ರೀಯ ಪಕ್ಷಗಳು ಒಪ್ಪಿಗೆ ಸೂಚಿಸಿ ಮಸೂದೆ ತಂದು ಕೇಂದ್ರಕ್ಕೆ ಈ ಬಗ್ಗೆ ನಿರ್ಣಯ ಕಳುಹಿಸಲಿ. ನಾವು ಸಿದ್ಧ ಇದ್ದೇವೆ. ಇದು ಕುಟುಂಬ ರಾಜಕಾರಣವಲ್ಲ. ದೇವರ ಅನುಗ್ರಹ ಅಷ್ಟೇ. 2023ಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ದೇವರು ಶಕ್ತಿ ನೀಡುತ್ತಾನೆ ಎಂದರು.

ಎರಡು ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದರೆ ಮಾಡಿದ ಊಟ ಕರಗುವುದಿಲ್ಲ. ಅವರವರ ಶಕ್ತಿ ಮೇಲೆ ಗೆಲ್ಲುತ್ತಾರೆ. ಹಿಂದಿನ ಬಾಗಿಲಿನಿಂದ ಹೋಗುವುದಿಲ್ಲ. ನಾವು ಜನರ ಮುಂದೆ ಹೋಗಿದ್ದೇವೆ ಎಂದರು.

ಶಾಸಕರ ಸಭೆ : ಕೋವಿಡ್‌ (Covid) ಮೂರನೇ ಅಲೆಗೆ ಸರ್ಕಾರದ ಸಿದ್ಧತೆ, ಮಹದಾಯಿ, ಉತ್ತರ ಕರ್ನಾಟಕದ (North Karnataka) ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆಯಲು ಜೆಡಿಎಸ್‌ ಶಾಸಕರು ತೀರ್ಮಾನಿಸಿದ್ದಾರೆ.

ಜೆಡಿಎಸ್‌ (JDS) ಮುಖಂಡ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಕೃಷ್ಣಾ, ಮಹದಾಯಿ, ಕೋವಿಡ್‌ ವಿಚಾರ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಯಿತು.

ವಿಧಾನಸಭೆಯಲ್ಲಿ ಅಂಗೀಕಾರ : 

  ಹಲವು ವಿರೋಧಗಳ ನಡುವೆ ಮತಾಂತರ ಬಿಲ್ (ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ) (Anti-Conversion Bill) ಕರ್ನಾಟಕ (Karnataka) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಗುರುವಾರ ಬೆಳಗ್ಗಿನಿಂದ ಮತಾಂತರ ಬಿಲ್ ಮೇಲೆ ಚರ್ಚೆ ನಡೆಯಿತು.

ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿಕ ನೀಡಿ,  ಮತಾಂತರ ನಿಷೇಧ ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕಾರ ಆಗಿದೆ. ಅನೇಕ ಟೀಕೆಗಳನ್ನ ಮಾಡಿದ್ದಾರೆ. ಹಿಡಿನ್ ಅಜೇಂಡಾ ಅಂದಿದ್ದಾರೆ.. ಯಾವುದೇ ಹಿಡನ್ ಅಜೇಂಡಾದಿಂದ ಈ ವಿಧೇಯಕ ತಂದಿಲ್ಲ. ಮತಾಂತರ ಮಾಡುವ ಹಕ್ಕು ಯಾರಿಗು ಇಲ್ಲ.. ಆಮಿಷದ ಮತಾಂತರಕ್ಕೆ ತಡೆಯುವ ಪ್ರಯತ್ನವನ್ನ ಈ ವಿಧೇಯಕದಲ್ಲಿ ತಂದಿದ್ದೇವೆ. ಮತಾಂತರ ಆದ್ರೆ, ದಲಿತರು ತಮಗೆ ಸಿಗುವ ಸೌಲಭ್ಯಗಳನ್ನ ಕಳೆದುಕೊಳ್ತಾರೆ.

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಸರ್ಕಾರದಿಂದ ಮೊದಲು ಸಿಗ್ತಿದ್ದ ಸೌಲಭ್ಯಗಳು ಸಿಗೊದಿಲ್ಲ ಈ ರೀತಿಯ ಅಂಶ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹಲವು ಕೋಲಾಹಲಗಳ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ  ಬಿಲ್ ನ್ನು ಮಂಡನೆ ಮಾಡಿದ್ದರು. ಮಂಡನೆ ಆದ ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ