
ಬೆಂಗಳೂರು (ಅ. 23): 3 ದಶಕಗಳ ಕಮ್ಯುನಿಸ್ಟ್ ಆಡಳಿತದ ನಂತರ ಬಂಗಾಳಿಗಳು ಹವಾಯಿ ಚಪ್ಪಲಿ ಹಾಕಿ ಹಳೆ ಕಾರ್ನಲ್ಲಿ ಓಡಾಡುವ ಹೋರಾಟಗಾರ್ತಿ ಮಮತಾ ಮೇಲೆ ವಿಶ್ವಾಸವಿಟ್ಟು ಅಧಿಕಾರ ಕೊಟ್ಟಿದ್ದರು. ಮಮತಾ ಕೆಂಪು ಪಾರ್ಟಿಗಳಿಗಿಂತ ಹೆಚ್ಚು ಸಮಾಜವಾದಿ ಆರ್ಥಿಕ ನಿಲುವುಗಳನ್ನು ತೋರಿಸುತ್ತಿದ್ದಾರೆ. ಆದರೆ ಅಭಿವೃದ್ಧಿವಂಚಿತ ಬಂಗಾಳಿ ಯುವಕರಿಗೆ 10 ವರ್ಷಗಳಲ್ಲಿ ಏನನ್ನಾದರೂ ಕೆಲಸ ಮಾಡಿ ತೋರಿಸುವ ಉತ್ಸಾಹ, ಇಚ್ಛಾಶಕ್ತಿ ತೋರಿಸಲಿಲ್ಲ.
ಬದಲಾಗಿ ಕೆಂಪು ಪಾರ್ಟಿಗಳನ್ನು ಇನ್ನಷ್ಟುಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್ನಿಂದ. 34 ವರ್ಷ ಕೆಂಪು ಪಕ್ಷಗಳು ಕೇವಲ ರಾಜಕೀಯ ಅಧಿಕಾರ ಹಿಡಿದಿರಲಿಲ್ಲ; ಬದಲಾಗಿ ಕೃಷಿ, ಶಿಕ್ಷಣ, ಮಹಿಳೆ, ಸಿನೆಮಾ, ನಾಟಕ, ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಂಪು ಆವರಿಸಿಕೊಂಡಿತ್ತು. ಮಮತಾ ಎಡದಿಂದ ರಾಜಕೀಯ ಅಧಿಕಾರವೇನೋ ಕಿತ್ತುಕೊಂಡರು. ಆದರೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವಂಥ ಬುದ್ಧಿಜೀವಿಗಳು ಮಮತಾ ಬಳಿ ಇರಲಿಲ್ಲ.
ಈಗಿನ ಯುವಜನತೆ 'ಕೇಸರಿ' ಯತ್ತ ವಾಲುತ್ತಿರುವುದೇಕೆ?
ಹೀಗಾಗಿ ಸ್ಥಳೀಯ ಅವಕಾಶವಾದಿಗಳು, ಗೂಂಡಾಗಳು, ಅಧಿಕಾರಶಾಹಿ ಇಂಥ ಕ್ಷೇತ್ರಗಳನ್ನು ಆವರಿಸಿಕೊಳ್ಳತೊಡಗಿದರು. ಇದು ಪ್ರತಿರೋಧಕ್ಕೆ ಕಾರಣವಾಯಿತು. ಮಮತಾರ ಬಲವಂತದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೆಂಪು ಪಕ್ಷಗಳಿಗೆ ಇಲ್ಲ ಎಂದು ಗೊತ್ತಾದ ನಂತರ, ಕೆಂಪು ಸಮರ್ಥಕರು ಕೂಡ ನಿಧಾನವಾಗಿ ಬಿಜೆಪಿ ಕಡೆ ವಾಲತೊಡಗಿದ್ದಾರೆ.
2000 ರ ಆಸುಪಾಸು ಹುಟ್ಟಿರುವ ಯುವಕರಿಗೆ ‘ಕೆಂಪು’ ಬಗ್ಗೆ ಆಸಕ್ತಿಯಿಲ್ಲ, ಮಮತಾ ಬಗ್ಗೆ ಪ್ರೀತಿಯಿಲ್ಲ, ಕೋಪವಿದೆ. ಹೀಗಾಗಿ ಆಸೆಯ ಕಣ್ಣಿನಿಂದ ಮೋದಿ, ಹಿಂದುತ್ವ, ಬಿಜೆಪಿ ಕಡೆ ನೋಡುತ್ತಿದ್ದಾರೆ. ಬಂಗಾಳದಲ್ಲಿ 30 ಪ್ರತಿಶತಕ್ಕೂ ಹೆಚ್ಚಿರುವ ಮುಸ್ಲಿಮರು ಈಗ ಮಮತಾರ ಸಾಮರ್ಥ್ಯವೂ ಹೌದು ದೌರ್ಬಲ್ಯವು ಹೌದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.