ಲೋಕಸಭಾ ಕಣದಲ್ಲಿ 121 ಅನಕ್ಷರಸ್ಥ, 80 ವರ್ಷಕ್ಕೂ ಮೇಲ್ಪಟ್ಟ 11 ಅಭ್ಯರ್ಥಿಗಳು ಸ್ಪರ್ಧೆ!

Published : May 24, 2024, 06:21 AM IST
ಲೋಕಸಭಾ ಕಣದಲ್ಲಿ 121 ಅನಕ್ಷರಸ್ಥ,  80 ವರ್ಷಕ್ಕೂ ಮೇಲ್ಪಟ್ಟ 11 ಅಭ್ಯರ್ಥಿಗಳು ಸ್ಪರ್ಧೆ!

ಸಾರಾಂಶ

ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳ ಪೈಕಿ ಇನ್ನೂ 2 ಹಂತದ ಚುನಾವಣೆಗಳು ಮಾತ್ರ ಬಾಕಿಯಿದೆ. ಈ ನಡುವೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಅಂಕಿ ಅಂಶ ಹೊರ ಬಿದ್ದಿದ್ದು, ಈ ಬಾರಿ 121 ಅನಕ್ಷರಸ್ಥ ಅಭ್ಯರ್ಥಿಗಳು ಜನರನ್ನು ಪ್ರತಿನಿಧಿಸಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

1502 ಪದವೀಧರ, 198 ವೈದ್ಯರ ಸ್ಪರ್ಧೆ

ನವದೆಹಲಿ (ಮೇ.24): ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳ ಪೈಕಿ ಇನ್ನೂ 2 ಹಂತದ ಚುನಾವಣೆಗಳು ಮಾತ್ರ ಬಾಕಿಯಿದೆ. ಈ ನಡುವೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಅಂಕಿ ಅಂಶ ಹೊರ ಬಿದ್ದಿದ್ದು, ಈ ಬಾರಿ 121 ಅನಕ್ಷರಸ್ಥ ಅಭ್ಯರ್ಥಿಗಳು ಜನರನ್ನು ಪ್ರತಿನಿಧಿಸಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ (ಎಡಿಆರ್) ಸಂಸ್ಥೆಯು ಒಟ್ಟು 543 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ, 8360 ಅಭ್ಯರ್ಥಿಗಳ ಪೈಕಿ 8337 ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಪ್ರಕಟಿಸಿದೆ. ಅದರಲ್ಲಿ 121 ಮಂದಿ ಅಭ್ಯರ್ಥಿಗಳು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಉಳಿದಂತೆ 359 ಜನರು 5ನೇ ತರಗತಿ, 647 ಮಂದಿ 8 ನೇ ಕ್ಲಾಸ್ ,1303 ಅಭ್ಯರ್ಥಿಗಳು 12ನೇ ತರಗತಿ, 1502 ನಾಯಕರು ಪದವಿ ಹಾಗೂ 198 ಜನ ವೈದ್ಯಕೀಯ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ.

 

ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

80 ವರ್ಷಕ್ಕೂ ಮೇಲ್ಪಟ್ಟವರು 11 ಅಭ್ಯರ್ಥಿಗಳು ಸ್ಪರ್ಧೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ 5 ಹಂತಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಈ ಚುನಾವಣೆಯಲ್ಲಿ ಪ್ರಮುಖವಾಗಿ 80 ವರ್ಷ ವಯೋಮಿತಿ ದಾಟಿದವರು 11 ಅಭ್ಯರ್ಥಿಗಳು ಸ್ಫರ್ಧೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ ಚುನಾವಣೆಗೆ ಸ್ಪರ್ಧಿಸಿರುವ 8,360 ಅಭ್ಯರ್ಥಿಗಳ ಪೈಕಿ 8,337 ಅಭ್ಯರ್ಥಿಗಳ ಡೇಟಾವನ್ನು ವಿಶ್ಲೇಷಣೆ ನೋಡಿದಾಗ ಇದರಲ್ಲಿ 25-30 ವಯೋಮಿತಿ ಇರುವ ಅಭ್ಯರ್ಥಿಗಳು 537 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಶೇ. 6.44 ರಷ್ಟು ಮಾತ್ರ ಇದೆ ಎಂದು ವರದಿ ಉಲ್ಲೇಖಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ