ದೆಹಲಿಯಲ್ಲಿ ಮಾತು: ಬಿಜೆಪಿ ಸೇರುವಂತೆ ಡಿಕೆ ಸುರೇಶ್‌ಗೆ ಆಹ್ವಾನ..!

By Suvarna NewsFirst Published Mar 3, 2020, 5:32 PM IST
Highlights

ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದನಿಗೆ ಬಿಜೆಪಿ ಸೇರುವಂತೆ ಬಹಿರಂಗ ಆಹ್ವಾನ ಬಂದಿದೆ.  ಸಂಸತ್ ಭವನದಲ್ಲಿ ಇರುವಾಗಲೇ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿದೆ.  ರಾಜ್ಯದ ಏಕೈಕ ಕಾಂಗ್ರೆಸ್ ಸಂಸದನಿಗೆ ಬಿಜೆಪಿ ಸೇರುವಂತೆ ಆಹ್ವಾನ ಕೊಟ್ಟಿದ್ಯಾರು? ಈ ಕೆಳಗಿನಂತಿದೆ ರಾಜಕೀಯ ವಿವರ.

ನವದೆಹಲಿ/ಬೆಂಗಳೂರು, (ಮಾ.03): ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್‌ಗೆ ಬಿಜೆಪಿ ಸೇರಲು ಆಹ್ವಾನ ನೀಡಲಾಗಿದೆ. ರಾಮನಗರ ಸಂಸದ ಡಿಕೆ ಸುರೇಶ್ ಅವರಿಗೆ ಲಡಾಖ್​ನ ಬಿಜೆಪಿ ಸಂಸದ ಜಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಆಹ್ವಾನ ಕೊಟ್ಟಿದ್ದಾರೆ.

ಬಿಜೆಪಿ ಸೇರ್ಕೊಳ್ಳಿ ಎಂದು ಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಚುಟುಕಾಗಿ ಕನ್ನಡದಲ್ಲೇ ಡಿ.ಕೆ.ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ.  ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲ ಸಂಸದರೂ ಸೇರಿದ್ದಾರೆ.

ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ

ಈ ವೇಳೆ ಕರ್ನಾಟಕದ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರಿಂದ ಜಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಕನ್ನಡ ಮಾತನಾಡುವುದು ಪ್ರಯತ್ನಿಸಿದ್ದರು. ಆ ವೇಳೆ ಡಿ.ಕೆ.ಸುರೇಶ್ ಬಂದಿದ್ದಾರೆ. 

ಆಗ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಕನ್ನಡದಲ್ಲಿ 'ಬಿಜೆಪಿ ಸೇರಿಕೊಳ್ಳಿ' ಎಂದು ಹೇಳಿದ್ದಾರೆ. ಅವರು ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಇದೊಂದು ಫನ್ನಿ ಟ್ವೀಟ್ ಅಂತ ಭಾವಿಸಲಾಗಿದೆ.

ಶಾಸಕರಿಗೆ ವಿಪ್‌ ಜಾರಿಗೊಳಿಸಿದ ಕಾಂಗ್ರೆಸ್‌, ತೀವ್ರ ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ನಡೆ

When three Kannadigas were trying to teach me to speak Kannada. I told ⁦⁩ to ‘BJP serikolli’.

So much fun with ⁦⁩ and ⁦⁩ pic.twitter.com/ROHiNmlfG9

— Jamyang Tsering Namgyal (@MPLadakh)

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ. ಇವರು 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

click me!