ಕರ್ನಾಟಕ ಕಾಂಗ್ರೆಸ್‌ ಛಿದ್ರಕ್ಕೆ ಕೆಸಿಆರ್‌ 500 ಕೋಟಿ ಆಮಿಷ: ರೇವಂತ ರೆಡ್ಡಿ

By Kannadaprabha NewsFirst Published Jan 21, 2023, 10:27 AM IST
Highlights

‘ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್‌ ಅಧ್ಯಕ್ಷ ಕೆ.ಚಂದ್ರಶೇಖರ ರಾವ್‌ ಅವರು, ಕರ್ನಾ​ಟಕ ವಿಧಾನಸಭೆ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಪಕ್ಷ​ದ​ಲ್ಲಿ ಒಡಕು ಉಂಟುಮಾಡಲು ಕರ್ನಾ​ಟ​ಕದ ಕಾಂಗ್ರೆಸ್‌ ನಾಯ​ಕ​ರೊ​ಬ್ಬ​ರಿಗೆ 500 ಕೋಟಿ ರು. ಆಮಿಷ ಒಡ್ಡಿ​ದ್ದಾರೆ.

ಹೈದ​ರಾ​ಬಾ​ದ್‌ (ಜ.21): ‘ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್‌ ಅಧ್ಯಕ್ಷ ಕೆ.ಚಂದ್ರಶೇಖರ ರಾವ್‌ ಅವರು, ಕರ್ನಾ​ಟಕ ವಿಧಾನಸಭೆ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಪಕ್ಷ​ದ​ಲ್ಲಿ ಒಡಕು ಉಂಟುಮಾಡಲು ಕರ್ನಾ​ಟ​ಕದ ಕಾಂಗ್ರೆಸ್‌ ನಾಯ​ಕ​ರೊ​ಬ್ಬ​ರಿಗೆ 500 ಕೋಟಿ ರು. ಆಮಿಷ ಒಡ್ಡಿ​ದ್ದಾರೆ. ಕರ್ನಾಟಕದಲ್ಲಿ ಬಿಜೆ​ಪಿ​ಯನ್ನು ಗೆಲ್ಲಿ​ಸು​ವು​ದ​ಕ್ಕಾಗಿ ಕೆಸಿಆರ್‌ ಹೀಗೆ ಮಾಡಿದ್ದಾರೆ’ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎ.ರೇವಂತ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾ​ಟ​ಕ​ದಲ್ಲಿ 25 ವಿಧಾ​ನ​ಸ​ಭೆ​ಗ​ಳಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯ​ರ್ಥಿ​ಗ​ಳನ್ನು ಕಣ​ಕ್ಕಿ​ಳಿಸಿ ಪಕ್ಷ​ದಲ್ಲಿ ಒಡ​ಕು ಉಂಟು ಮಾಡಿ​ದರೆ, 500 ಕೋಟಿ ರು. ನೀಡು​ವು​ದಾಗಿ ಕರ್ನಾ​ಟ​ಕದ ಕಾಂಗ್ರೆಸ್‌ ನಾಯ​ಕ​ರೊ​ಬ್ಬ​ರಿಗೆ ಕೆಸಿ​ಆರ್‌ ಆಮಿಷ ಒಡ್ಡಿ​ದ್ದಾರೆ. ಪಂಚಾ​ಯತ್‌ ರಾಜ್‌ ಮತ್ತು ಗ್ರಾಮೀಣ ಅಭಿ​ವೃದ್ಧಿ ಸಚಿವ ಎರ್ರಾ​ಬೆಲಿ ದಯಾ​ಕರ್‌ ರಾವ್‌ ಅವರ ಮನೆ​ಯಲ್ಲಿ ಸಭೆ ನಡೆ​ಸಿದ ಕೆಸಿ​ಆರ್‌ ಈ ವಿಷಯ ಪ್ರಸ್ತಾ​ಪಿ​ಸಿ​ದ್ದಾರೆ. ಆದರೆ ಕರ್ನಾ​ಟ​ಕದ ಕಾಂಗ್ರೆಸ್‌ ನಾಯಕ ಈ ಆಫ​ರ್‌ ಅನ್ನು ತಿರ​ಸ್ಕ​ರಿ​ಸಿ​ದ್ದಾರೆ’ ಎಂದರು. ‘ಕೆಸಿ​ಆರ್‌ ಅವರ ಈ ದ್ವಂದ್ವ​ಗಳು ಗಮ​ನಕ್ಕೆ ಬಂದ ಕಾರ​ಣ​ದಿಂದಲೇ ಕರ್ನಾ​ಟಕ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರು ಇತ್ತೀಚೆಗೆ ಕೆಸಿಆರ್‌ ಅವರ ಬಿಆ​ರ್‌​ಎಸ್‌ ಪಕ್ಷದ ಸಾರ್ವ​ಜ​ನಿಕ ಸಭೆ​ಯಲ್ಲಿ ಭಾಗಿ​ಯಾ​ಗ​ಲಿಲ್ಲ’ ಎಂದು ಹೇಳಿದರು.

‘ಕರ್ನಾ​ಟ​ಕ​ದಲ್ಲಿ ಕಾಂಗ್ರೆಸ್‌ ಸೋಲಿ​ಸುವ ಸುಪಾ​ರಿ​ಯನ್ನು ಕೆಸಿ​ಆರ್‌ ತೆಗೆ​ದು​ಕೊಂಡಿ​ದ್ದಾರೆ. ಬಿಜೆಪಿ ಲಾಭ ಮಾಡಿ​ಕೊ​ಡುವ ಏಕೈಕ ಉದ್ದೇ​ಶ​ದಿಂದ ಕೆಸಿ​ಆರ್‌ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡು​ತ್ತಾರೆ. ಕಾಂಗ್ರೆಸ್‌ ಸೋಲಿಸಿದರೆ ಕೆಸಿಆರ್‌ಗೆ ಲಾಭವೇನು? ನಿವ್ಯಾಕೆ ಚುನಾ​ವ​ಣೆ​ಯಲ್ಲಿ ಪ್ರಭಾವ ಬೀರಲು ಪ್ರಯ​ತ್ನಿ​ಸು​ತ್ತಿ​ದ್ದೀ​ರಿ? ಬಳ್ಳಾರಿ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಜೊತೆ ಏಕೆ ಮಾತು​ಕತೆ ನಡೆ​ಸು​ತ್ತಿ​ದ್ದೀರಿ?’ ಎಂದು ರೇವಂತ್‌ ಪ್ರಶ್ನಿ​ಸಿ​ರು. ಅಲ್ಲದೇ, 150ಕ್ಕೂ ಹೆಚ್ಚು ಪೊಲೀಸ್‌ ಅಧಿ​ಕಾ​ರಿ​ಗ​ಳನ್ನು ಕರ್ನಾ​ಟ​ಕಕ್ಕೆ ಕಳು​ಹಿಸಿ ಚುನಾ​ವ​ಣೆ ಸಂಬಂಧ ಬೇಹು​ಗಾ​ರಿಕೆ ನಡೆ​ಸು​ತ್ತಿ​ದ್ದಾರೆ ಎಂದು ರೇವಂತ್‌ ಆರೋಪಿಸಿದರು.

‘ಮುಸ್ಲಿಂ ಓಲೈಕೆಗೆ ಮೋದಿಯಿಂದ ಬಿಎಸ್‌ವೈ ಬಳಕೆ’: ಬಿ.ಕೆ.ಹರಿಪ್ರಸಾದ್‌

ಇದು ಕೇವಲ ಊಹಾಪೋಹ: ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕು ಮೂಡಿಸಲು ತೆಲಂಗಾಣದ ಮುಖ್ಯಮಂತ್ರಿಗಳು 500 ಕೋಟಿ ರು. ನೀಡುತ್ತಿದ್ದಾರೆ ಎಂಬ ಸುದ್ದಿ ಕೇವಲ ಊಹಾಪೋಹ. ಈ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಉತ್ತರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

click me!