ಮಾಜಿ ಸಿಎಂ ಎಸ್‌ಎಂ ಕೃಷ್ಣರಿಂದ ದೇವೇಗೌಡರ ಸರ್ಕಾರ ಪತನದ ಕಾರಣ ಬಹಿರಂಗ

Kannadaprabha News   | Asianet News
Published : Jun 06, 2021, 10:56 AM ISTUpdated : Jun 06, 2021, 12:04 PM IST
ಮಾಜಿ ಸಿಎಂ ಎಸ್‌ಎಂ ಕೃಷ್ಣರಿಂದ ದೇವೇಗೌಡರ ಸರ್ಕಾರ ಪತನದ ಕಾರಣ ಬಹಿರಂಗ

ಸಾರಾಂಶ

ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಸಾಧನೆ ಸ್ಮರಣೆ ಅಭಿಯಾನ ಕಾಂಗ್ರೆಸ್ ಬೆಂಬಲವನ್ನು ವಾಪಸ್ ಪಡೆದಿದ್ದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರ ಸರ್ಕಾರ ಪತನ ದೇವೇಗೌಡರ ಕೇಂದ್ರ ಸರ್ಕಾರ ಪತನದ ವಿಚಾರ ನೆನೆದ  ಮಾಜಿ ಸಿಎಂ ಎಸ್‌.ಎಂ.ಕೃಷ್ಣ  

 ಬೆಂಗಳೂರು (ಜೂ.06): ಕಾಂಗ್ರೆಸ್ ಬೆಂಬಲವನ್ನು ವಾಪಸ್ ಪಡೆದಿದ್ದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ನೇತೃತ್ವದ ಕೇಂದ್ರ ಸರ್ಕಾರ 1997ರಲ್ಲಿ  ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಲಿಲ್ಲ ಎಂದು ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಹೇಳಿದರು. 

ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಸಾಧನೆ ಸ್ಮರಣೆ ಅಭಿಯಾನದಲ್ಲಿ ಶನಿವಾರ  ಮಾತನಾಡಿದ ಅವರು ಪ್ರಜಾಪ್ರಭುತ್ವ  ವ್ಯವಸ್ಥೆಯ ಚೌಕಟ್ಟಿನಲ್ಲಿ  ದೇವೇಗೌಡ ಅವರು ಪ್ರಧಾನಿಯಾಗಿದ್ದರು. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವಾಪಸ್ ಪಡೆಯುವಂತೆ  ಹೈ ಕಮಾಂಡ್‌ಗೆ ಪದೇ ಪದೇ ಸಂದೇಶ ರವಾನಿಸುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ದೇವೇಗೌಡ ಸರ್ಕಾರಕ್ಕೆ ನಿಡಿದ ಬೆಂಬಲವನ್ನು ಹಿಂಪಡೆಯಿತು. ಪರಿಣಾಮ ದೇವೇಗೌಡ ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದರು ಎಂದರು. 

'ಪ್ರಧಾನಿ ಹುದ್ದೆ ತೊರೆದರೂ ದೇಶಕ್ಕಾಗಿ ಹೋರಾಡುವ ದೇವೇಗೌಡರು!'

ವಾಜಪೇಯಿ ಸರ್ಕಾರ ಪತನಗೊಂಡ ಬಳಿಕ ತೃತೀಯ ರಂಗಕ್ಕೆ  ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ಆಗಿನ ಅಧ್ಯಕ್ಷರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಹೇಳಿದ್ದರು. ನನ್ನ ಮತ್ತು ದಿವಂಗತ ಸಚ್ಚಿದಾನಂದ ಸಮ್ಮುಖದಲ್ಲಿ ದೇವೇಗೌಡರಿಗೆ ನೀವೇ ಪ್ರಧಾನಿಯಾಗಬೇಕು ಮತ್ತು ಇದಕ್ಕೆ ಕಾಂಗ್ರೆಸ್‌ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದರು. ಇದಕ್ಕೆ ನಾನು ಸಾಕ್ಷಿಯಾಗಿದ್ದೆ ಎಂದರು. 

ಪ್ರಧಾನಿಯಾಗಿ ಶಿಸ್ತು ಸಂಯಮ ಗೌರವದಿಂದ ದೇಶವನ್ನು ದೇವೇಗೌಡರು ಆಳಿದರು. ಯಾವ ಅಪಸ್ವರಗಳು ಇರಲಿಲ್ಲ. ಆದರೆ ಕಾಂಗ್ರೆಸ್‌ ಅಧ್ಯಕ್ಷರು ಬದಲಾದರು ನರಸಿಂಹ ರಾವ್ ಬದಲಿಗೆ ಸೀತಾರಾಮ್ ಕೇಸರಿ ಅಧ್ಯಕ್ಷರಾದರು. ಸೀತಾರಾಂ ಕೇಸರಿ ಮತ್ತು ದೇವೇಗೌಡ ಅವರ ಸಂಬಂಧ ಚೆನ್ನಾಗಿತ್ತಾದರೂ ನಂತರ ದಿನದಲ್ಲಿ  ಅನುಮಾಗಳು ಶುರುವಾಯಿತು.  ಇದಕ್ಕೆ ಪೂರಕ ಎಂಬಂತೆ ರಾಜ್ಯದ ಕಾಂಗ್ರೆಸ್ ನಾಯಕರು ಹೈ ಕಮಾಂಡ್ ಬೆಂಬಲ ವಾಪಸ್ ಪಡೆಯುವಂತೆ ಆಗಾಗ್ಗೆ ಸಂದೇಶಗಳನ್ನು ರವಾನಿಸುತ್ತಿದ್ದರು. ಈ ಒತ್ತಡಕ್ಕೆ ದೇವೇಗೌಡರು ಬಲಿಯಾಗಬೇಕಾಯಿತು ಎಂದು ನೆನಸಿಕೊಂಡರು. 

ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯುವ ಸುಳಿವು  ದೇವೇಗೌಡ ಅವರಿಗೆ ಗುಪ್ತಚರದಿಂದ ಮಾಹಿತಿ ಲಭ್ಯವಾಗಿತ್ತು.  ನಾನು ಮತ್ತು ಹಿರಿಯ ನಾಯಕರಾಗಿದ್ದಾರ್.ಕೆ ಧವನ್ ಅವರು ದೇವೇಗೌಡರ ಮನೆಗೆ ಹೋಗಿದ್ದ ವೆಳೆ ಈ ವಿಚಾರ ತಿಳಿಯಿತು.  ಧವನ್ ಇದನ್ನು ತಡೆಯಲು ಮುಂದಾಗಿದ್ದರು. ಆದರೆ ಸೀತಾರಂ ಕೇಸರಿ ಅಷ್ಟರಲ್ಲೇ ರಾಷ್ಟ್ರಪತಿ ಭೇಟಿ ಮಾಡಿ ಬೆಂಬಲ ವಾಪಸ್ ಪಡೆಯುವ  ಮಾಹಿತಿ ನೀಡಿದ್ದರು.  ಹೀಗಾಗಿ ರಾಷ್ಟ್ರಪತಿಗಳು ಲೋಕಸಭೆಯಲ್ಲಿ ಬಹುಮತ ಸಾಬೀತುಪಡುಸು ಸೂಚಿಸಿದ್ದು, ಸರ್ಕಾರ ಪತನವಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ